ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನಲ್ಲಿ ಭಾರಿ ಮಳೆಗೆ ಕೊಚ್ಚಿ ಹೋದ ಬಾಲಕ
ಬಾಲಕನ ದೇಹ ಇದುವರೆಗೂ ಪತ್ತೆಯಾಗಿಲ್ಲ. ಅರವಿಂದನ ದೇಹವನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ಹರಿಯುತ್ತಿರುವ ನೀರನ್ನು ನೋಡಲು ಹೋಗಿ ಈ ಬಾಲಕಿ ಮೋರಿಯಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈತನನ್ನು ಅವರು ಗುರುತಿಸಿದ್ದಾಗಿಯೂ ಹೇಳಿದ್ದಾರೆ.
ಅರವಿಂದನ ಪೋಷಕರಿಗೆ ದಿಕ್ಕು ತೋಚದಂತಾಗಿದ್ದು ಅವರು ಮಗನ ಪತ್ತೆಗಾಗಿ ಶ್ರಮಿಸುತ್ತಿದ್ದಾರೆ. ಕಳೆದಬಾರಿ ಸುರಿದ ಭಾರಿ ಮಳೆಯಿಂದಾಗಿ ದೇಗುಲಕ್ಕೆ ಚರಂಡಿ ನೀರು ನುಗ್ಗಿ ಮಲಿನವಾಗಿತ್ತು. ಆಗ ಎಚ್ಚೆತ್ತುಕೊಂಡ ಬೆಂಗಳೂರು ಮಹಾನಗರ ಪಾಲಿಕೆ ಆಲಯಕ್ಕೆ ನೀರು ನುಗ್ಗದಂತೆ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸಿತ್ತು.
ಆಲಯದ ಪಕ್ಕದಲ್ಲೇ ಇರುವ ದೊಡ್ಡ ಮೋರಿಯಲ್ಲಿ (ವೃಷಭಾವತಿ ನದಿ ) ನಗರದ ನಾನಾ ಭಾಗಗಳಿಂದ ಹೊಲಸು ನೀರು ಹರಿಯುತ್ತದೆ. ಮಳೆ ಬಿದ್ದರಂತೂ ನೀರಿನ ಹರಿವು ತೀವ್ರವಾಗಿರುತ್ತದೆ. ಈಗ ಅರವಿಂದ ಕೊಚ್ಚಿಹೋಗಿರುವುದು ಈ ಮೋರಿಗೆ ಬಿದ್ದು. ಬಾಲಕನ ಪತ್ತೆ ಕಾರ್ಯ ನಡೆಯುತ್ತಿದೆ. (ದಟ್ಸ್ಕನ್ನಡ ವಾರ್ತೆ)
Comments
ಬೆಂಗಳೂರು ಮಳೆ ಶಾಂತಿ ನಗರ ಮೆಜೆಸ್ಟಿಕ್ ರಾಜಾಜಿನಗರ bangalore rain malleshwaram shantinagar rajajinagar gandhinagar
English summary
A thirteen-year-old boy who got swept away in a drain during a heavy downpour on Friday in Bangalore notorious drain, Venkateshwaranagar near Gali Anjaneya Swamy temple. Aravind has swept away after he fell into an open drain at at Mysore Road.The civic authorities are yet to locate the child's body.
Story first published: Friday, May 13, 2011, 18:07 [IST]