ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೌಡರ ಭೂ ವ್ಯವಹಾರಗಳ ಮೇಲೆ ಬಿಜೆಪಿ ಹೊಸ ಬೆಳಕು
ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಅವರು 2005-07 ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಪುತ್ರರು ಖರೀದಿಸಿರುವ 'ಭೂಮಂಡಲ'ದ ವಿರಾಟ ದರ್ಶನ ಮಾಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಜೆಡಿಎಸ್ ಸಾರಿರುವ ಜನಾಂದೋಲನದ ತೀವ್ರತೆಯನ್ನು ಕುಗ್ಗಿಸಲು ಬಿಜೆಪಿ ಈ ತಂತ್ರವನ್ನು ರೂಪಿಸಿದೆ ಎನ್ನಲಾಗಿದೆ.
ಗೌಡ ಕುಟುಂಬ ಖರೀದಿಸಿರುವ ಆಸ್ತಿಯ ಬಗ್ಗೆ ಯಾವುದೇ ಗೊಂದಲ ಬೇಡ. ರಾಜ್ಯದಲ್ಲಿ ದೀರ್ಘ ಕಾಲದಿಂದ ಈ ಕುಟುಂಬ ಅತ್ಯಂತ ಭ್ರಷ್ಟ ಎನಿಸಿಕೊಂಡಿದೆ. ಯಾರಾದರೂ ಇದರ ದಾಖಲೆಗಳ ಸಾಕ್ಷ್ಯ ಕೋರಿದರೆ ಒದಗಿಸಲು ತಾವು ಸಿದ್ಧವಿರುವುದಾಗಿ ಪುಟ್ಟಸ್ವಾಮಿ ಆಪಾದಿಸಿದ್ದಾರೆ.
ಗೌಡ ಆಯೋಜಿಸಿರುವ ಆಂದೋಲನಕ್ಕೆ ಅರ್ಥವೇ ಇಲ್ಲ. ಅದೊಂದು ದೊಡ್ಡ ಜೋಕ್. ಅಪ್ಪ-ಮಕ್ಕಳ ಮೇಲೆ ಭ್ರಷ್ಟತೆಯ ಸರಮಾಲೆಯೇ ಇದೆ. ಈಗಿನ ಪ್ರಹಸನ ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ ಎಂದು ಜೆಡಿಎಸ್ ನ ಮಾಜಿ ಕುಟುಂಬಸ್ಥ ಕುಟುಕಿದರು.
Comments
English summary
Political Secretary of CM Yeddyurappa B J Puttaswamy, has released the list of properties bought by Gowda, his sons, including Former CM H D Kumaraswamy during 2005-07. The revelation appeared to be an exercise by the BJP to blunt the campaign the JD(S) supremo has been leading against the BJP government.
Story first published: Sunday, May 8, 2011, 15:45 [IST]