ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕೃತಕಾಮಿ ಜೈಶಂಕರ್ ಹಿಡಿದ ಪೊಲೀಸರಿಗೆ ಬಹುಮಾನ

By Prasad
|
Google Oneindia Kannada News

Psychopath Jaishankar
ಚಿತ್ರದುರ್ಗ, ಮೇ 5 : ಒಂಟಿ ಮಹಿಳೆಯನ್ನು ಹಾಡುಹಗಲೆ ಅತ್ಯಾಚಾರ ಮಾಡಿ ಹತ್ಯೆಗೈಯುತ್ತಿದ್ದ ವಿಕೃತಕಾಮಿ, ಸೈಕೋ ಕಿಲ್ಲರ್ ಜೈಶಂಕರ್(34)ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಚಿತ್ರದುರ್ಗ, ಬಿಜಾಪುರ ಮತ್ತು ತುಮಕೂರು ಜಿಲ್ಲೆಯ ಪೊಲೀಸರಿಗೆ ತಲಾ 1 ಲಕ್ಷ ರು. ಬಹುಮಾನ ಘೋಷಿಸಲಾಗಿದೆ. ಈ ವಿಷಯವನ್ನು ಚಿತ್ರದುರ್ಗದ ಡಿಜಿಪಿ ರಮೇಶ್ ಎಸ್ ಪಿ ಅವರು ಘೋಷಿಸಿದರು.

ಬೆಂಗಳೂರು ಗ್ರಾಮಾಂತರ, ಬಿಜಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ಮಹಿಳೆಯರಿಗೆ ದುಃಸ್ವಪ್ನವಾಗಿ ಕಾಡಿದ್ದ ಜೈಶಂಕರ್ ನನ್ನು ಬಿಜಾಪುರದಲ್ಲಿ ಝುಳಕಿ ಪೊಲೀಸರು ಬಂಧಿಸಿದ್ದರು, ನಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಆತ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಇಂದು ಚಿತ್ರದುರ್ಗದಲ್ಲಿ ನ್ಯಾಯಾಲಯಕ್ಕೆ ಅವನನ್ನು ಹಾಜರುಪಡಿಸಲಾಗುತ್ತಿದೆ.

ತಮಿಳುನಾಡು ಮೂಲದ ಜೈಶಂಕರ್ ಅಲ್ಲಿ 19 ಕೊಲೆ ಮಾಡಿ ಬಂಧಿತನಾಗಿದ್ದ, ನಂತರ ಕೊಯಮತ್ತೂರು ಸೆಂಟ್ರಲ್ ಜೈಲಿನಿಂದ ಸೇಲಂ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಅಲ್ಲಿಂದ ಅವನ ಕ್ರೈಂ ಆಪರೇಷನ್ ಕರ್ನಾಟಕದಲ್ಲಿ ಪ್ರಾರಂಭವಾಗಿತ್ತು. ಚಿತ್ರದುರ್ಗ ಮತ್ತು ತುಮಕೂರಿನಲ್ಲಿ 8 ಮಹಿಳೆಯರು ಅವನಿಗೆ ಬಲಿಯಾಗಿದ್ದರು.

ಗಂಡನ ಎದುರಿಗೇ ಹೆಂಡತಿಯನ್ನು ಅತ್ಯಾಚಾರ ಮಾಡಿ ಕೊಲೆಗೈಯುತ್ತಿದ್ದ ವಿಕೃತಕಾಮಿ ಜೈಶಂಕರ್. ಚಿತ್ರದುರ್ಗದ ರಂಗಸ್ವಾಮಿ ಎಂಬುವವರ ಹೆಂಡತಿಯನ್ನು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ತೋಟ ಕಾಯುತ್ತಿದ್ದ ಮಹಿಳೆಯನ್ನು ಆಕೆಯ ಗಂಡನ ಎದುರಿಗೇ ಹತ್ಯೆಗೈದಿದ್ದ. ಮಹಿಳೆಯ ಮೇಲೆ ಬಲಾತ್ಕಾರ ಮಾಡಿ ಹಿಂಸಿಸಿ ವಿಕೃತ ಆನಂದ ಪಡೆಯುತ್ತಿದ್ದ. ಈತನ ಬಂಧನದಿಂದ ಮಹಿಳೆಯರಿಗೆ ವರ್ಣಿಸಲಾರದ ನಿರಾಳತೆ ಮೂಡಿದೆ.

English summary
Chitradurga DGP Ramesh SP has announced Rs. 1 lakh reward each to the Chitradurga, Bijapur and Tumkur police who caught psychopath, serial-killer Jaishankar. He was caught in Bijapur. Jaishankar had killed many women in front of their husbands only after raping them. Jaishankar was produced before Chitradurga judicial magistrate on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X