ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಾಡೆನ್ ಹತ್ಯೆ : ಮೈಸೂರು ಅರಮನೆಗೆ ಪ್ರವೇಶ ನಿಷೇಧ
ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅರಮನೆ ಸುತ್ತ ಸಂಸತ್ತಿಗೆ ಒದಗಿಸಿರುವ ಭದ್ರತೆಯ ಮಾದರಿಯಲ್ಲಿ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ. ಜೊತೆಗೆ ಮೈಸೂರು ಮತ್ತು ಸುತ್ತಮುತ್ತಲು ಇರುವ ಪ್ರೇಕ್ಷಣೀಯ ಸ್ಥಳಗಳ ಮೇಲೂ ನಿಗಾ ವಹಿಸುವಂತೆ ಆದೇಶ ನೀಡಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕರು ಕೂಡ ತಣ್ಣಗೆ ಮನೆಯಲ್ಲಿ ಉಳಿಯುವುದು ಮೇಲು.
ಬೆಂಗಳೂರಿನಲ್ಲಿರುವ ಅಮೆರಿಕ ಮೂಲದ ಕಂಪನಿಗಳಿಗೆ ಹೆಚ್ಚಿನ ಭದ್ರತೆ ವಹಿಸಲು ಮುಖ್ಯಮಂತ್ರಿ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಐಟಿ ಸಿಟಿಯಲ್ಲಿಯೇ ಐಬಿಎಂ, ಮೈಕ್ರೊಸಾಫ್ಟ್ ಸೇರಿದಂತೆ 50ಕ್ಕೂ ಹೆಚ್ಚು ಅಮೆರಿಕದ ಸಾಫ್ಟ್ ವೇರ್ ಮತ್ತಿತರ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಮೈಸೂರಿನಲ್ಲಿ ಕೂಡ ಅನೇಕ ಐಟಿ ಕಂಪನಿಗಳು ಬೀಡುಬಿಟ್ಟಿವೆ.
Comments
ಮೈಸೂರು ಬೆಂಗಳೂರು ಮೈಸೂರು ಅರಮನೆ ಒಸಾಮಾ ಬಿನ್ ಲಾಡೆನ್ ಯಡಿಯೂರಪ್ಪ mysore bangalore mysore palace yediyurappa osama bin laden
English summary
Tight security has been provided to Mysore palace following death of terrorist Osama Bin Laden. Chief Minister BS Yeddyurappa has ordered security cover for American companies in Bangalore. The center too has sounded a nation-wide alert.
Story first published: Tuesday, May 3, 2011, 14:45 [IST]