ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ
ನಗರದ ಕೆಲವೆಡೆ ಆಲಿಕಲ್ಲು ಸಮೇತ ಮಳೆ ಬಿದ್ದಿದೆ. ಅಶೋಕ ಪಿಲ್ಲರ್ ಬಳಿ ಮರವೊಂದು ಧರೆಗೆ ಉರುಳಿಬಿದ್ದ ಕಾರಣ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಮಳೆಯ ಕಾರಣ ನಗರದ ಹಲವೆಡೆ ರಸ್ತೆ ಸಂಚಾರದಲ್ಲಿ ವ್ಯತ್ಯಯ ಕಂಡುಬಂತು. ಕೊಂಚ ಬಿಡುವು ತೆಗೆದುಕೊಂಡಿದ್ದ ಮಳೆರಾಯ ಇಂದು ಭಾನುವಾರ ಬೆಂಗಳೂರನ್ನು ತಂಪಾಗಿಸಿದ್ದಾನೆ.
ಇಂಡಿಯನ್ ಎಕ್ಸ್ಪ್ರೆಸ್, ಬ್ಯಾಟರಾಯನಪುರ, ಶಿವಾಜಿನಗರ ಮುಂದಾದ ಕಡೆಗಳಲ್ಲೂ ಕಾರ್ಮೋಡಗಳು ಕವಿದಿದ್ದು ಗುಡುಗು ಸಹಿತ ಭಾರಿ ಮಳೆಯನ್ನು ನಿರೀಕ್ಷಿಸಲಾಗಿದೆ. ಉಳಿದೆಡೆ ಆಕಾಶ ಶುಭ್ರವಾಗಿದ್ದು ಮೋಡಗಳು ಚದುರಿದ ವಾತಾವರಣ ಕಂಡುಬಂದಿದೆ. ಬೆಂಗಳೂರಿನಲ್ಲಿ ವರುಣ ಅಬ್ಬರ ಮುಂದುವರಿಯುವ ಸಾಧ್ಯತೆಗಳಿವೆ.
Comments
English summary
A hailstorm accompanied by strong winds lashed Bangalore Sunday evening, bringing much relief from the heat and cheering up Bangaloreans. Summer showers have hit Bangalore, giving much-needed relief from the scorching heat.
Story first published: Sunday, May 1, 2011, 16:40 [IST]