ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಣೂರು ದೊಡ್ಡಹುಣಸೆ ಮರಕ್ಕೆ ಜಗ್ಗೇಶ್ ಪ್ರದಕ್ಷಿಣೆ

By Prasad
|
Google Oneindia Kannada News

Jaggesh felicitated by Channabasava Mahaswamy
ಸವಣೂರ, ಏ. 26 : ನಗರದ ದೊಡ್ಡಹುಣಸೆ ಕಲ್ಮಠದೊಂದಿಗೆ ಅತ್ಯಂತ ನಿಕಟವಾದ ಸಂಪರ್ಕವನ್ನು ಹೊಂದಿರುವ ನವರಸ ನಾಯಕ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಜಗ್ಗೇಶ್ ಹಾಗೂ ಚಿತ್ರನಿರ್ಮಾಪಕ ಶ್ರೀನಿವಾಸ್ ಸೋಮವಾರ ಸಂಜೆ ಸವಣೂರಿಗೆ ಭೆಟ್ಟಿ ನೀಡಿದ್ದರು.

ಪವಿತ್ರವಾದ ದೊಡ್ಡಹುಣಸೆ ವೃಕ್ಷ ಸಂಕುಲವನ್ನು ವೀಕ್ಷಿಸಿ, ಪ್ರದಕ್ಷಿಣೆ ಕೈಗೊಂಡು ನಮನ ಸಲ್ಲಿಸಿದ ಜಗ್ಗೇಶ್, ಶ್ರೀಮಠದ ವತಿಯಿಂದ ಶ್ರೀಗಳಾದ ಚನ್ನಬಸವ ಮಹಾಸ್ವಾಮಿಗಳು ಮಾಡಿದ ಸನ್ಮಾನವನ್ನು ಸ್ವೀಕರಿಸಿದರು. ಶ್ರೀಮಠದ ಆವರಣದಲ್ಲಿ ನೆರೆದಿದ್ದ ನೂರಾರು ಮಕ್ಕಳು, ಶಿಕ್ಷಕ ವೃಂದದೊಂದಿಗೆ ಕೆಲವು ಕಾಲ ಕಳೆದ ಜಗ್ಗೇಶ್, ಮುತ್ತಿಕೊಂಡಿದ್ದ ಮಕ್ಕಳಿಗೆ ತಮ್ಮ ಹಸ್ಥಾಕ್ಷರಗಳನ್ನು ನೀಡಿದರು.

ಜಗ್ಗೇಶ್ ಅವರಿಗೆ ಸವಣೂರ ಬಸ್ ಡೀಪೋದ ಅವ್ಯವಸ್ಥೆಯನ್ನು ವಿವರಿಸಿದ ಸವಣೂರಿನ ಪ್ರಮುಖರು, ಅದರ ಅಭಿವೃದ್ದಿಯನ್ನು ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಅತ್ಯಂತ ಶಿಥಿಲವಾದ ಕಟ್ಟಡದಲ್ಲಿ ಸವಣೂರ ಡೀಪೋ ಕಾರ್ಯನಿರ್ವಹಿಸುತ್ತಿದೆ. ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ಯಾವದೇ ಹಂತದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಡೀಪೋಕ್ಕೆ ಪುನಶ್ಚೇತನ ನೀಡಬೇಕು. ಸೂಕ್ತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಕೋರಲಾಯಿತು.

ಆದಿ ಬಣಜಿಗ ಸಮಾಜದ ಅಧ್ಯಕ್ಷ ಗಂಗಾಧರ ಬಾಣದ, ಮಹೇಶ ಸಾಲಿಮಠ, ಪುರಸಭೆಯ ಸದಸ್ಯ ಯಲ್ಲಪ್ಪಗೌಡ ಪಾಟೀಲ, ಯೋಗೇಶ ಜಂಬಗಿ, ಎಚ್.ಎಮ್ ಮುದಿಗೌಡ್ರ, ಬಿ.ಎಮ್ ಪಾಟೀಲ ಸೇರಿದಂತೆ ನಗರದ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
Navarasa nayaka actor Jaggesh visits Dodda Hunise mara in Savanur in Haveri district. KSRTC vice-chairman Jaggesh was felicitated by Channabasava Mahaswami. A memorandum was presented to him to upgrade KSRTC bus depot in Savanur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X