ಮೈದಾನದಲ್ಲಿ ಪಾಕ್ ಆಟಗಾರರ ನಮಾಜ್: ಠಾಕ್ರೆ ಆಕ್ಷೇಪ
ಮುಂಬೈ, ಮಾ. 31: ಭಾರತ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನಿ ಆಟಗಾರರು ಮೊಹಾಲಿ ಕ್ರೀಡಾಂಗಣದಲ್ಲಿ ಸಾಮೂಹಿಕವಾಗಿ ನಮಾಜು ಮಾಡಿರುವುದಕ್ಕೆ ಶಿವಸೇನಾ ಮುಖ್ಯಸ್ಥ ಬಾಳಾ ಠಾಖ್ರೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮುಂಚೆ ಶಾಂತಿ ಮಾತುಕತೆಗಳಾಗಿ ಕ್ರಿಕೆಟ್ ಬಳಸಿಕೊಂಡು ಪಾಕಿಸ್ತಾನ ಪ್ರಧಾನಿ ಗಿಲಾನಿ ಅವರನ್ನು ಮೊಹಾಲಿಗೆ ಬರುವಂತೆ ಆಹ್ವಾನಿಸಿದ್ದನ್ನು ಟೀಕಿಸಿದ್ದರು.
ಪಾಕಿಸ್ತಾನದ ಆಟಗಾರರು ತಮ್ಮ ಪ್ರಾರ್ಥನೆ(ನಮಾಜ್) ಯನ್ನು ತಮ್ಮ ಕೋಣೆಗಳಲ್ಲಿ ಮಾಡಬಹುದಿತ್ತು. ಆದರೆ, ಅವರು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮೊಹಾಲಿ ಕ್ರೀಡಾಂಗಣದಲ್ಲಿ ನಮಾಜ್ ಮಾಡುವ ಮೂಲಕ ಧರ್ಮಯುದ್ಧಕ್ಕೆ ಕರೆ ಕೊಟ್ಟಿದ್ದಾರೆ ಎಂದು ಠಾಕ್ರೆ ಟೀಕಿಸಿದ್ದಾರೆ. ಗಡಿ ಭಾಗದಲ್ಲಿ ದೇಶ ಕಾಯುವ ಯೋಧರನ್ನು ಇಲ್ಲಿ ಪಾಕಿಸ್ತಾನದ ಕ್ರಿಕೆಟ್ಟಿಗರನ್ನು ಕಾಯಲು ನೇಮಿಸಿದ್ದು ಎಷ್ಟು ಸರಿ ಎಂದಿರುವ ಠಾಕ್ರೆ, ಸಶಸ್ತ್ರಪಡೆ, ಎನ್ ಎಸ್ ಜಿ ಕಮಾಂಡೋ ಗಳನ್ನು ಕೇವಲ ಕ್ರಿಕೆಟ್ ಪಂದ್ಯ ರಕ್ಷಣೆಗಾಗಿ ಬಳಸುತ್ತಿರುವ ದುರಂತ ಎಂದಿದ್ದಾರೆ. ಶಾಂತಿ ಹೆಸರಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ