ಬೆಳಗಾವಿ ಮಹಾರಾಷ್ಟದ ಆಸ್ತಿ,ಯಪ್ಪಾ!
* ಮಹಾರಾಷ್ಟ್ರದ ಪಯೋನಿರ್ ಸೊಸೈಟಿ, ಪುಣೆ ಬ್ಯಾಂಕ್ ಸೇರಿದಂತೆ ಹತ್ತು ಹಲವು ಜನಪ್ರಿಯ ಸಂಸ್ಥೆಗಳು ದೈನಂದಿನ ವ್ಯವಹಾರವನ್ನು ಮರಾಠಿ ಭಾಷೆಯಲ್ಲೇ ಮಾಡುತ್ತಾ ಬಂದಿವೆ. ಇಂದಿರಾ ಗಾಂಧಿ ಕಾಲದಲ್ಲಿ ಗಡಿ ವಿವಾದ ಬಗೆಹರಿಸಲು ಸ್ಥಾಪಿತವಾದ ಮಹಾಜನ್ ಆಯೋಗದ ವರದಿ ಬಗ್ಗೆ ಇಂದಿರಾ ಗಾಂಧಿ ಅವರಿಗೆ ಸಮಾಧಾನವಿರಲಿಲ್ಲ. ನಂತರ ಕರ್ನಾಟಕದ 233 ಗ್ರಾಮಗಳು ಸೇರಿದಂತೆ ಬೆಳಗಾಂನ ಕೆಲಭಾಗವನ್ನು ಮಹಾರಾಷ್ಟ್ರಕ್ಕೆ ನೀಡಲಾಗಿತ್ತು.
* ಮಹಾಜನ್ ಆಯೋಗದ ವರದಿಯನ್ನು ಖಂಡಿಸಿ, 2003ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. 131(ಬಿ) ವಿಧೇಯಕದಡಿಯಲ್ಲಿ ಹಾಕಲಾಗಿದ್ದ ಈ ಕೇಸ್ ಇನ್ನೂ ಇತ್ಯರ್ಥವಾಗಿಲ್ಲ. ಕರ್ನಾಟಕ ಸರ್ಕಾರ ಮಾತ್ರ ಮರಾಠಿಗರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿಲ್ಲ.
ಬೆಳಗಾಂನಲ್ಲಿ ಮೊದಲ ಪತ್ರಿಕೆ ಮರಾಠಿ ಭಾಷೆಯಲ್ಲಿ ಬಂದಿದೆ. ಮೊದಲ ಶಾಲೆ ಮರಾಠಿ ಭಾಷೆ ಆಧಾರಿತ ಶಾಲೆ. ಸರ್ಕಾರಿ ಕಚೇರಿಗಳಲ್ಲೂ ಮರಾಠಿ ಭಾಷೆಯೇ ಪ್ರಧಾನವಾಗಿದೆ. ಬೆಳಗಾಂನಲ್ಲಿ ಮರಾಠಿ ಸಂಸ್ಕೃತಿ, ಮರಾಠಿಗರದ್ದೇ ಮೇಲುಗೈ ಎಂದು ನಿಜಲಿಂಗಪ್ಪ ಅವರು ಒಪ್ಪಿಕೊಂಡಿದ್ದರು ಎಂಬ ಪತ್ರಿಕಾ ಪ್ರತಿಗಳನ್ನು ಪುಟದಲ್ಲಿ ಹಾಕಲಾಗಿದೆ. ಈ ಪುಟವನ್ನು ಬೆಂಬಲಿಸುತ್ತಿರುವ ಮರಾಠಿಗರೆಲ್ಲರೂ ಮರಾಠಿ ಭಾಷೆಯಲ್ಲೇ ಉತ್ತರಿಸುತ್ತಿದ್ದು, ಶಿವಸೇನೆ ಪ್ರೇರಿತರಾಗಿ ಜೈ ಮಾಹಾರಾಷ್ಟ್ರ ಎಂಬ ಘೋಷಣೆಗಳನ್ನು ಹಾಕಿದ್ದಾರೆ.
ಈ ಕುಹಕ ಮತ್ತು ಕುಚೋದ್ಯದ ಪುಟಕ್ಕೆ ಕನ್ನಡಿಗರು ಏನು ಮಾಡಬಹುದು?
ಫೇಸ್ ಬುಕ್ ಬಳಸುವ ಕನ್ನಡಿಗರೆಲ್ಲರೂ ಈ Belgaum belongs to Maharashtra ಎಂಬ ಸಮುದಾಯ ಪುಟಕ್ಕೆ ಹೋಗಿ report page ಅನ್ನು ಕ್ಲಿಕ್ ಮಾಡಿ, ಒಂದು ವಿಂಡೋ ಓಪನ್ ಆಗುತ್ತೆ. ಅದರಲ್ಲಿ ಇರುವ ಐದಾರು ಆಯ್ಕೆಯಲ್ಲಿ ಸರಿಯಾದ ಆಯ್ಕೆ ಮಾಡಿ ವರದಿ ಸಲ್ಲಿಸಬಹುದು.
*
ಈ
ಸಮುದಾಯ
ಪುಟ
ಸ್ಪಾಮ್
ಅಥವಾ
ಸ್ಕಾಮ್
;
*
ಅವಹೇಳನಕಾರಿ
ಭಾಷಣ
ಅಥವಾ
ವೈಯಕ್ತಿಕ
ದ್ವೇಷ;
*
ಗಲಭೆ
ಅಥವಾ
ಅಹಿತಕಾರಿ
ನಡವಳಿಕೆ;
*
ನಗ್ನತೆ,
ಅಶ್ಲೀಲ
ಅಥವಾ
ಲೈಂಗಿಕ
ದೌರ್ಜನ್ಯಯುಕ್ತ
ಮಾಹಿತಿ;
* ನಕಲು ಪ್ರತಿ, ಸುಳ್ಳು ಅಥವಾ ಈ ವಿಭಾಗಕ್ಕೆ ಸೇರದ ಪುಟ ಎಂಬ ವಿವಿಧ ಆಯ್ಕೆಯಲ್ಲಿ ಒಂದನ್ನು ಆರಿಸಿ ವರದಿ ಸಲ್ಲಿಸಬಹುದು. ಆದರೆ, report ಸಲ್ಲಿಸಿದ ತಕ್ಷಣಕ್ಕೆ ಸಮುದಾಯ ಪುಟವನ್ನು ಫೇಸ್ ಬುಕ್ ನಿಂದ ತೆಗೆಯುವುದಿಲ್ಲ. ಹೆಚ್ಚು ಜನರಿಂದ ವರದಿ ಬಂದ ನಂತರ ಫೇಸ್ ಬುಕ್ ಅಗತ್ಯ ಕ್ರಮ ಕೈಗೊಳ್ಳುತ್ತದೆ.