ಸವಣೂರು ಭ್ರಷ್ಟ ಇಂಜಿನಿಯರ್ ಲೋಕಾಯುಕ್ತ ಬಲೆಗೆ
ಸವಣೂರಿನ ಅಂಬೇಡ್ಕರ್ ಓಣಿಯ ದೇವಸ್ಥಾನದ ಕಟ್ಟೆ ನಿರ್ಮಾಣವನ್ನು 27,000 ರೂಗಳ ಒಟ್ಟು ಮೊತ್ತದಲ್ಲಿ ನಿರ್ಮಿಸಲಾಗಿದೆ. ಅದರ ಬಿಲ್ ಪಾವತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಮುಂದುವರೆಸಲು ಪುರಸಭೆಯ ಕಿರಿಯ ಅಭಿಯಂತರಾದ ಮಾನಸಿಂಗ್ ರಾಠೋಡ್ 2000/- ರೂಗಳನ್ನು ಫಿರ್ಯಾದಿ ಅರಬ್ಬೇಗ್ ಹಯಾತ್ಬೇಗ್ ಮಿರ್ಜಾ ಅವರ ಬಳಿ ಅಪೇಕ್ಷಿಸಿದ್ದಾರೆ.
ತಮಗೆ ಈ ಬಗ್ಗೆ ಮಾಹಿತಿ ನೀಡಿದ್ದ ಫಿರ್ಯಾದಿ ಮಿರ್ಜಾ ಲಂಚದ ಹಣವನ್ನು ನೀಡುತ್ತಿದ್ದ ಸಂದರ್ಭದಲ್ಲಿ ಈ ದಾಳಿ ಮಾಡಲಾಗಿದೆ. ಪುರಸಭೆಯ ಕಿರಿಯ ಅಭಿಯಂತರರನ್ನು ಲಂಚದ ಹಣದೊಂದಿಗೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ವರಿಷ್ಠಾಧಿಕಾರಿ ಎಸ್.ಎಫ್ ಕಂಬಾರ, ಡಿಎಸ್ಪಿ ಎಮ್.ಬಿ ಪಾಟೀಲ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹಾವೇರಿಯ ಪಿಐ ಎಮ್.ಕೆ ಗಂಗಲ, ಬಿ.ಸಿ ಉಮಾಪತಿ ಸಿಬ್ಬಂದಿಗಳಾದ ಎ.ಕೆ ಕುಲಕರ್ಣಿ, ಎಸ್.ಡಿ ಪಾಲೇಗೊಂದಿ, ಎಮ್.ಡಿ ಹಿರೇಮಠ, ಕೆ.ಎಮ್ ಹಿರೇಮಠ, ಎಸ್.ಎಮ್ ಹಿರೇಮಠ, ಮದರಕಂಡಿ ಮುಂತಾದವರು ದಾಳಿಯಲ್ಲಿ ಪಾಲ್ಗೊಂಡಿದ್ದರು.