ಸೂಪರ್ ಮೂನ್ ನೋಡಿ ಭಯಬೀಳಬೇಡಿ
ಸೂರ್ಯ ಸದಾ ತನ್ನ ಕಕ್ಷೆಯಲ್ಲಿ ತಿರುಗುತ್ತದೆ. ಭೂಮಿ ತನ್ನ ಕಕ್ಷೆಯಲ್ಲಿ ತಿರುಗುತ್ತಾ ಸೂರ್ಯನಿಗೆ ಸುತ್ತು ಬರುತ್ತಿರುತ್ತದೆ. ಚಂದ್ರ ನಮ್ಮ ಭೂಮಿಗೆ ಸುತ್ತು ಬರುತ್ತಾ ಭೂಮಿಯೊಂದಿಗೆ ಸೂರ್ಯನಿಗೂ ಸುತ್ತು ಬರುತ್ತಿರುತ್ತದೆ. ಹುಣ್ಣಿಮೆ ದಿನ ಸೂರ್ಯ-ಚಂದ್ರ ಭೂಮಿಯ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಆಗ ಅವುಗಳ ಆಕರ್ಷಣೆಗಳು ಕೂಡಾ ಎದುರು ಬದುರಾಗಿರುತ್ತದೆ. ಅಮಾವಾಸ್ಯೆ ದಿನ ಸೂರ್ಯ- ಚಂದ್ರರು ಭೂಮಿಯ ಒಂದೇ ದಿಕ್ಕಿನಲ್ಲಿರುತ್ತವೆ. ಆಗ ಅವುಗಳ ಆಕರ್ಷಣೆ ಕೂಡ ಭೂಮಿಗೆ ಒಂದೇ ದಿಕ್ಕಿನಲ್ಲಿರುತ್ತವೆ.
ಈ ಒಂದು ಕಾರಣದಿಂದ ಸಮುದ್ರ ದಡದಲ್ಲಿ ಹೊಳೆ ಮುಂತಾದ ನೀರಿನ ತೊರೆಗಳಲ್ಲಿ ಭರತ-ಇಳಿತ ಉಂಟಾಗುತ್ತದೆ. ಮಾರ್ಚ್ 19ರಂದು ಹುಣ್ಣಿಮೆ ಚಂದ್ರ ಭೂಮಿಗೆ ಅತೀ ಸಮೀಪ ಬರುತ್ತದೆ. ಅದರ ಆಕರ್ಷಣೆಯ ಅಧಿಕ ಆದುದರಿಂದ ಎಲ್ಲಾ ಕಡೆ ಭರತ ಇಳಿತದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರಬಹುದು. ಆ ಸಮಯದಲ್ಲಿ ಹೊಳೆಗಳಿಗೆ ಇಳಿಯುವಾಗ ಜಾಗ್ರತೆ ವಹಿಸುವುದು ಉತ್ತಮ. ಹೆದರಿಕೆಯ ಅಗತ್ಯ ಇಲ್ಲ.
ಅರಬ್ಬಿ ಸಮುದ್ರದಲ್ಲಿ ಅಥವಾ ಉತ್ತರ ಹಿಂದೂ ಮಹಾಸಾಗರದಲ್ಲಿ ಪ್ರಬಲ ಭೂಕಂಪ ಆದರೆ ಮಾತ್ರ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸುನಾಮಿ ಏಳಬಹುದು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಭಯ ಅನವಶ್ಯಕ. ಇಂದು ಜಪಾನ್ ಪರಿಸರ ನಾಶವಾಗುತ್ತಾ ಹೋದರೆ ನಾಳೆ ಜಗತ್ತಿನ ಎಲ್ಲೆಲ್ಲೂ ಸುನಾಮಿ ಸಂಭವಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಭಯದ ಅವಶ್ಯಕತೆ ಇಲ್ಲ.
1955, 1974, 1992 ಮತ್ತು 2005ರಲ್ಲಿ ಚಂದ್ರ ಹೀಗೆ ಭೂಮಿಯ ಹತ್ತಿರಕ್ಕೆ (perigee) ಬಂದಿದ್ದ. ಆಗೇನೂ ಅಂಥಾದ್ದು ಆಗಿರಲಿಲ್ಲ. ಆದರೆ ಈ ಬಾರಿ...? ಭಾರಿ ಮಳೆ, ಭೂಕಂಪ, ಅಗ್ನಿಪರ್ವತಗಳ ರುದ್ರ ನರ್ತನ ಮುಂತಾದ ಮಹಾ ನೈಸರ್ಗಿಕ ವಿಕೋಪಗಳು ಮುಂದಿನ ಶನಿವಾರ ಸಂಭವಿಸಲಿವೆಯೇ? ಕಾದು ನೋಡೋಣ.