ಬಳ್ಳಾರಿ ಜಿಂದಾಲ್ ಮೇಲೆ ಆದಾಯ ತೆರಿಗೆ ದಾಳಿ
ಜಿಂದಾಲ್ನ ತೋರಣಗಲ್ಲು ಜೆಎಸ್ಡಬ್ಲ್ಯು ಘಟಕದ ಮಾನವಸಂಪನ್ಮೂಲ ವಿಭಾಗ, ಲೆಕ್ಕಚಾರ ವಿಭಾಗ ಸೇರಿ ಇನ್ನಿತರೆ ವಿಭಾಗಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದಲೇ ದಾಳಿ ನಡೆಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
ಈ ದಾಳಿಗೆ ಪೂರಕವಾಗಿ ಸೌತ್ ವೆಸ್ಟ್ ಮೈನಿಂಗ್ ಕಂಪನಿ, ತಿಮ್ಮಪ್ಪನಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಾ ಜಿಂದಾಲ್ ಸಮೂಹಗಳ ಜೊತೆ ವ್ಯವಹಾರಿಕ ಸಂಪರ್ಕ ಹೊಂದಿರುವ ಎಂಎಂಎಲ್ ಹಾಗೂ ಇನ್ನಿತರೆ ಗಣಿ ಕಂಪನಿಗಳ ಮೇಲೆ ಕೂಡ ಅಧಿಕಾರಿಗಳು ದಾಳಿ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇದೇ ರೀತಿಯಲ್ಲಿ ಜಿಂದಾಲ್ ಗ್ರೂಪ್ನ ಬೆಂಗಳೂರು ಮತ್ತು ಬಾಂಬೆ ಘಟಕಗಳ ಮೇಲೆ ಕೂಡ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ತನಿಖೆ ನಡೆಸಿದ್ದಾರೆ.
ಆದರೆ, ತನಿಖೆಯ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗುತ್ತಿಲ್ಲ. ಜಿಂದಾಲ್ನ ಸಿಬ್ಬಂದಿ, ಸಮೂಹದ ಎಲ್ಲಾ ಕಚೇರಿಗಳ ಮೇಲೆ ದಾಳಿ ನಡೆದಿದೆ. ಕೈಗಾರಿಕಾ ಉತ್ಪಾದನಾ ಘಟಕಗಳು ಎಂದಿನಂತೆ ನಡೆಯುತ್ತಿವೆ. ಕಂಪನಿಗಳ ಚಟುವಟಿಕೆಗಳು ಯಥಾರೀತಿಯಲ್ಲಿ ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರೇರಣ' ಟ್ರಸ್ಟ್ಗೆ ದೇಣಿಗೆ ನೀಡಿರುವ ಪಟ್ಟಿಯಲ್ಲಿ ಜೆಎಸ್ಡಬ್ಲು ಕಂಪನಿ ಕೂಡ ಸೇರಿದೆ. ಈ ವಿಚಾರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಬಂದಿದೆ. ಈ ಹಿನ್ನಲೆಯಲ್ಲಿ ಜಿಂದಾಲ್ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದಿದೆ ಎಂದೇ ಹೇಳಲಾಗಿದೆ.