ಗೌ.ಡಾ. ಆಗಲೊಲ್ಲೆ ಎಂದ ಸಚಿನ್ ತೆಂಡೂಲ್ಕರ್
'ನಾನಿನ್ನೂ ವೃತ್ತಿಪರ ಕ್ರಿಕೆಟ್ ನಲ್ಲಿ ಸಕ್ರಿಯನಾಗಿದ್ದೇನೆ. ಆದ್ದರಿಂದ ಈ ಗೌರವ ಸದ್ಯಕ್ಕೆ ಬೇಡ. ಇದೇ ರೀತಿ ದೇಶ, ವಿದೇಶಗಳ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಲು ಮುಂದಾದಾಗ ನಾನು ನಯವಾಗಿ ತಿರಸ್ಕರಿಸಿರುವೆ' ಎಂದು ತೆಂಡೂಲ್ಕರ್ ಸಮಜಾಯಿಶಿ ಕೊಟ್ಟಿದ್ದಾರೆ. RGUHS ವೈಸ್ ಚಾನ್ಸಲರ್, ರಿಜಿಸ್ಟ್ರಾರ್, ಸಿಂಡಿಕೇಟ್ ನ ಇಬ್ಬರು ಸದಸ್ಯರಿಗೆ ತೆಂಡೂಲ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಗೌ.ಡಾ. ಮತ್ತು ಅದರ ಸುತ್ತ ಸುತ್ತಿಕೊಂಡ ವಿವಾದಗಳು
ವಿವಿ ಈಗ ಸಚಿನ್ ರಿಂದ ಅಧಿಕೃತ ಪತ್ರಕ್ಕಾಗಿ ಕಾಯುತ್ತಿದ್ದು, ಅದನ್ನು ವಿವಿಯ ಚಾನ್ಸಲರ್, ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಗಮನಕ್ಕೆ ತರಲಿದೆ. ವಿವಿ ಈ ಬಾರಿ ಒಬ್ಬರನ್ನು ಮಾತ್ರ ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿರುವುದರಿಂದ ಡಾಕ್ಟರೇಟ್ ಪ್ರದಾನ ಸಮಾರಂಭವನ್ನು ರದ್ದುಗೊಳಿಸುವ ಸಾಧ್ಯತೆಯೂ ಇದೆ.
ಕುತೂಹಲಕರ ವಿಷಯವೆಂದರೆ ಮೈಸೂರು ವಿಶ್ವವಿದ್ಯಾಲಯವೂ ಇದೇ ರೀತಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರಿಗೆ ಗೌ.ಡಾ. ನೀಡುವ ತೀರ್ಮಾನ ತೆಗೆದುಕೊಂಡಿದೆ. ಆದರೆ ಈ ಸಂಬಂಧ ವಿವಿ ತನ್ನ ನಿರ್ಣಯ ತಿಳಿಸಿ, ಸಚಿನ್ ಗೆ ಇನ್ನೂ ಅಧಿಕೃತ ಪತ್ರ ಬರೆದಿಲ್ಲ. ವಿವಿ ಈ ಬಾರಿ ಒಟ್ಟು ನಾಲ್ವರಿಗೆ ಡಾಕ್ಟರೇಟ್ ಗೌರವ ನೀಡಲು ನಿರ್ಧಸಿದೆ.