ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಳ್ಳಾರಿಯಲ್ಲಿ ಅದಿರು ಸಾಗಣಿಕೆದಾರರ ಮೇಲೆ ಐಟಿ ದಾಳಿ
ಹೊಸಪೇಟೆಯ ಡ್ರೀಂ ಲಾಜಸ್ಟಿಕ್ನ ವಿವೇಕ್ ಹೆಬ್ಬಾರ್ ಮತ್ತು ಈ ಕಂಪನಿಯ ಪಾಲುದಾರರಾದ ಪ್ರಕಾಶ್ ಮತ್ತು ಪ್ರಭು ಹೆಗಡೆ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ದಾಳಿ ಇನ್ನೂ ಮುಂದುವರೆದಿದೆ. ಮಂಗಳವಾರ ನಸುಕಿನ 6 ಗಂಟೆಗೆ ತಂಡಗಳಾಗಿ ಹೊಸಪೇಟೆಯ ವಿವೇಕ್ ಹೆಬ್ಬಾರ್ ಅವರ ಮನೆಗೆ ಆಗಮಿಸಿದ ಆದಾಯ ತೆರಿಗೆಯ 20ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ, ಎಡಬಿಡದೇ ತನಿಖೆ ಮುಂದುವರೆಸಿದೆ.
ವಿವೇಕ್ ಹೆಬ್ಬಾರ್ ಅವರ ತಂದೆ ಶಿವರಾಂ ಹೆಬ್ಬಾರ್ ಅವರು 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ಇವರು ಕಾರವಾರದ ಯಲ್ಲಾಪುರ ಮೂಲದವರು. ಅಲ್ಲದೇ, ಡ್ರೀಂ ಲಾಜಸ್ಟಿಕ್ ಕಂಪನಿಗೆ ಸೇರಿದ ಬೆಂಗಳೂರು, ಕಾರವಾರ ಮತ್ತು ಇನ್ನಿತರೆಡೆಯ ಎಲ್ಲಾ ಕೇಂದ್ರಗಳ ಮೇಲೆ ಕೂಡ ದಾಳಿ ನಡೆದಿದೆ.
ಇವರಲ್ಲದೇ ಸಂಪ್ರದಾಯದಂತೆ ವಿವಿಧ ಲಾಜಸ್ಟಿಕ್ ಕಂಪನಿಗಳನ್ನು ನಡೆಸುತ್ತಿದ್ದ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಕಚೇರಿ, ಮನೆಗಳ ಮೇಲೂ ದಾಳಿ ನಡೆದಿದೆ.
Comments
ಬಳ್ಳಾರಿ ಕಬ್ಬಿಣದ ಅದಿರು ಜಿಲ್ಲಾಸುದ್ದಿ ಬೇಲೇಕೇರಿ ಬಂದರು ರೋಹಿಣಿ ಬಳ್ಳಾರಿ ನಾಗರಿಕ ಪತ್ರಕರ್ತ iron ore district news it raid citizen journalist
English summary
Income Tax department has raided several people including industrialist Vivek Hebbar, Prabhu Hegde in Hospet, Bellary district in connection with Belekeri port scam. Bellary district news by Rohini Bellary, citizen journalist.
Story first published: Wednesday, February 16, 2011, 9:51 [IST]