ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಶೈವ ಸ್ವಾಮೀಜಿಗಳೆದುರಲ್ಲಿ ಸಾಮೂಹಿಕ ವಿವಾಹ

By * ರೋಹಿಣಿ ಬಳ್ಳಾರಿ
|
Google Oneindia Kannada News

ಬಳ್ಳಾರಿ, ಫೆ. 14 : ದರೂರು ಗ್ರಾಮದ ಶ್ರೀ ಸಂಗನಬಸವೇಶ್ವರ ಮಠದಲ್ಲಿ ಫೆಬ್ರವರಿ 17ರ ಗುರುವಾರ ಉಚಿತ ಸಾಮೂಹಿಕ ವಿವಾಹಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ಕೊಟ್ಟೂರೇಶ್ವರ ಮಹಾದ್ವಾರದ ಉದ್ಘಾಟನೆ, ಶ್ರೀ ಎಡೆಯೂರು ಸಿದ್ದಲಿಂಗ ಮಹಾಶಿವಯೋಗಿಗಳ ಪುರಾಣ ಮಹಾಮಂಗಳೋತ್ಸವ ನಡೆಯಲಿದೆ.

ಅಡವಿ ಅಮರೇಶ್ವರ ಕ್ಷೇತ್ರದ ಶಾಂತಮಲ್ಲ ಸ್ವಾಮೀಜಿ, ಗರಗ ನಾಗಲಾಪುರ ಒಪ್ಪತೇಶ್ವರ ಮಠದ ಮರಿಮಹಾಂತ ಸ್ವಾಮೀಜಿ, ಸಂತೆಕಲ್ಲೂರು ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ಯದ್ದಲದಡ್ಡಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠ ಸಿದ್ಧಲಿಂಗ ಸ್ವಾಮೀಜಿ, ಜಮಖಂಡಿ ಓಲೇಮಠದ ಡಾ. ಅಭಿನವ ಕುಮಾರ ಸ್ವಾಮೀಜಿ, ಕರೆಗುಡ್ಡದ ಮಹಾಂತ ಲಿಂಗ ಶಿವಾಚಾರ್ಯ, ದರೂರು ಕೊಟ್ಟೂರು ದೇವರು, ಕೊಂಚಗೇರಿ ಶಿವಶರಣ ಶಿವಪ್ಪ ತಾತನವರು ದಿವ್ಯ ಸಾನ್ನಿಧ್ಯ ವಹಿಸುವರು.

ಸಂಸದ ಶಿವರಾಮೇಗೌಡ, ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ಮೃತ್ಯುಂಜಯ ಜಿನಗ, ಮಾಜಿ ಶಾಸಕರಾದ ಟಿ.ಎಂ. ಚಂದ್ರಶೇಖರಯ್ಯ, ಎಂ. ಶಂಕರರೆಡ್ಡಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಕೆ. ಮಲಿಕಾರ್ಜುನ ಸ್ವಾಮಿ, ಬುಡಾ ಅಧ್ಯಕ್ಷ ಎಸ್. ಗುರುಲಿಂಗನಗೌಡ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಚೊಕ್ಕಬಸವನ ಗೌಡ, ಜಿಲ್ಲಾಪಂಚಾಯಿತಿ ಸದಸ್ಯರಾದ ಬಿ. ವಸಂತಗೌಡ, ಬಿ. ಮಲ್ಲಮ್ಮ ಇನ್ನಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Mass marriages will be conducted in Bellary on February 17 in the presence of Veerashaiva seers. Bellary district news by Rohini Bellary, citizen journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X