ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಿಲ್ಲಾ ಓಂಬಡ್ಸ್ ಮನ್ ನೇಮಕ ಅಗತ್ಯ : ಲೋಕಾಯುಕ್ತ
ಬೆಂಗಳೂರು ದೂರದರ್ಶನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದಂತೆ ನಾನು ಪರಮಾಧಿಕಾರ ಕೇಳಿಲ್ಲ. ಹಾಗೆ ಕೇಳಿದರೆ ಅದು ಸರ್ವಾಧಿಕಾರ ಆಗುತ್ತದೆ. ಹೆಚ್ಚಿನ ಅಧಿಕಾರ ಕೇಳಿದ್ದೆ. ಆದರೆ, ಈವರೆಗೂ ಸರಕಾರ ನನಗೆ ಯಾವ ಹೆಚ್ಚಿನ ಅಧಿಕಾರವನ್ನೂ ನೀಡಿಲ್ಲ. ಇದರಿಂದ ನಾನು ಹತಾಶನಾಗಿಲ್ಲ ಎಂದು ಹೆಗ್ಡೆ ಸ್ಪಷ್ಟಪಡಿಸಿದರು.
ಭ್ರಷ್ಟಾಚಾರ ನಿಗ್ರಹಕ್ಕೆ ಜಿಲ್ಲಾ ಮಟ್ಟದಲ್ಲಿ ಓಂಬಡ್ಸ್ ಮನ್ ಗಳನ್ನು ನೇಮಕ ಮಾಡಬೇಕಾಗಿದೆ. ಬೀದರ್ ನಿಂದ ಕೋಲಾರದವರಿಗಿನ 30 ಜನರ ಆಯ್ದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ವೈಯಕ್ತಿಕ ಸಾಲ ವಸೂಲಿಯಿಂದ ಹಿಡಿದು ರಸ್ತೆ ಕಾಮಗಾರಿಯಲ್ಲಿ ಸರಕಾರದ ಹಣ ದುರ್ಬಳಿಕೆ ಕುರಿತ ಪ್ರಶ್ನೆಗೆ ಸ್ಪಂದಿಸಿದ ಅವರು, ಲಿಖಿತ ರೂಪದಲ್ಲಿ ದೂರು ಸಲ್ಲಿಸಿದರೆ, ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದರು.
Comments
ಸಂತೋಷ್ ಹೆಗ್ಡೆ ಲೋಕಾಯುಕ್ತ ದೂರದರ್ಶನ ಬೆಂಗಳೂರು ಸಂವಾದ ಭ್ರಷ್ಟಾಚಾರ santosh hegde lokayukta interaction corruption
English summary
Lokayukta N Santosh Hegde has asserted government should appoint district ombudsman for curbing corruption, Hegde has alleged that the additional powers sought by his organisation were not provided. He is interact with people in Bangalore Dooradarshan on Sunday. ಜಿಲ್ಲಾ ಓಂಬಡ್ಸ್ ಮನ್ ನೇಮಕ ಅಗತ್ಯ
Story first published: Monday, January 17, 2011, 15:49 [IST]