ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಕೋಟಿ ಕೋಡ್ತೀನಿ ಸೀಡಿ ಬಿಡಬೇಡಿ : ನಿತ್ಯಾ

By Mrutyunjaya Kalmat
|
Google Oneindia Kannada News

Swami Nithyananda
ಬೆಂಗಳೂರು, ಜ. 5 : ರಂಜಿತಾ ಮಾಧ್ಯಮದ ಮುಂದೆ ಬಂದು ಹೋದ ನಂತರ ಸ್ವಾಮಿ ನಿತ್ಯಾನಂದನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತರತರಹದ ಕಥೆಗಳು ಹೊರ ಬರತೊಡಗಿವೆ. ಸೀಡಿಯಲ್ಲಿರುವುದು ನಿತ್ಯಾ-ರಂಜಿತಾ ಎಂದು ಸ್ಪಷ್ಟಪಡಿಸಿದ್ದ ಸಿಐಡಿ ಅಧಿಕಾರಿಗಳು, ಇದೀಗ ಇನ್ನೊಂದು ರಹಸ್ಯವನ್ನು ಬಯಲುಗೊಳಿಸಿದ್ದಾರೆ.

ರಾಸಲೀಲೆಯ ಸೀಡಿಗಳು ಮಾಧ್ಯಮಗಳ ಕೈಗೆ ಸಿಗುವುದಕ್ಕಿಂತೂ ಮುಂಚೆ ಪತ್ರಕರ್ತನೊಬ್ಬ ವಕೀಲನೊಂದಿಗೆ ರಾಸಲೀಲೆಯ ಸೀಡಿಗಳನ್ನು ಕೈಯಲ್ಲಿಟ್ಟುಕೊಂಡು 25 ಕೋಟಿ ರುಪಾಯಿಗಳಿಗೆ ಡಿಮ್ಯಾಂಡ್ ಮಾಡಿದ್ದ. ಸೀಡಿಯನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಚೌಕಾಶಿಗಿಳಿದ ನಿತ್ಯಾನಂದ 10 ಕೋಟಿ ರುಪಾಯಿಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದ. ಯಾವ ಕಾರಣಕ್ಕೂ ಟಿವಿಗಳಿಗೆ ಸೀಡಿಗಳನ್ನು ನೀಡಬಾರದು ಎಂದು ಷರತ್ತು ಬೇರೆ ವಿಧಿಸಿದ್ದ ಎನ್ನುವ ಸಂಗತಿಯನ್ನು ಸ್ವತಃ ನಿತ್ಯಾನಂದ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ನಿತ್ಯಾನಂದ ಸೀಡಿಯಲ್ಲಿರುವುದು ಸುಳ್ಳು ಎನ್ನುವುದಾದರೆ, ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ನೀಡಲು ಒಪ್ಪಿಕೊಂಡಿದ್ದಾದರೂ ಏಕೆ ? ತಪ್ಪೆ ಮಾಡದಿದ್ದರೆ ನೇರವಾಗಿ ಪತ್ರಕರ್ತ ಹಾಗೂ ವಕೀಲನ ವಿರುದ್ಧ ಮೊಕದ್ದಮೆ ದಾಖಲಿಸಬೇಕಿತ್ತು. ಇದ್ಯಾವುದನ್ನೂ ನಿತ್ಯಾನಂದ ಮಾಡಿಲ್ಲ. ಹೀಗಾಗಿ ಸೀಡಿಯಲ್ಲಿರುವುದು ನಿತ್ಯಾನಂದ ರಂಜಿತಾ ಅಲ್ಲದೇ ಮತ್ಯಾರು ಇರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಾಸಲೀಲೆ ಹಗರಣ ಬೆಳಕಿಗೆ ಬಂದ ನಂತರವೂ ರಂಜಿತಾಳೊಂದಿಗೆ ನಿತ್ಯ ಸಂಪರ್ಕದಲ್ಲಿದ್ದೆ ಎಂದು ನಿತ್ಯಾನಂದ ಒಪ್ಪಿಕೊಂಡಿದ್ದಾನೆ ಎಂದು ಹೇಳಿರುವ ಸಿಐಡಿ ಅಧಿಕಾರಿಗಳು, ಕೋಟಿಗಟ್ಟಲೆ ಹಣ ವಹಿವಾಟು ನಡೆದಿರುವ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆ ಎಂದಿದ್ದಾರೆ.(ಸ್ವಾಮಿ ನಿತ್ಯಾನಂದ)

English summary
Investigations have revealed that Swami Nithyananda was blackmailed just before the sex scandal broke out.During interrogation, Nithyananda confessed before CID investigators that a journalist allegedly took Rs. 10 crore as ransom from one of his followers with a promise that he would not make the CDs public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X