ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಂದು ಕೃಷ್ಣಾ ನೀರು ಹಂಚಿಕೆ ನ್ಯಾಯಾಧೀಕರಣ ತೀರ್ಪು
ಆಲಮಟ್ಟಿ ಆಣೆಕಟ್ಟು ಎತ್ತರ ಆಗುವುದೋ ಅಥವಾ ಈಗಿರುವಂತೆಯೇ 519.6 ಮೀಟರ್ ಗೆ ಸೀಮಿತವಾಗುವುದೋ ಎಂಬ ಚರ್ಚೆ ಈ ಭಾಗದ ಜನರಲ್ಲಿ ಮನೆ ಮಾಡಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಇಂದು ತೀರ್ಪಿನಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಬ್ರಿಜೇಶ್ ಮಿಶ್ರಾ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ ಕೆ ಶೇಟ್, ನ್ಯಾ. ಎಸ್ ಪಿ ಶ್ರೀವಾಸ್ತವ ನೇತೃತ್ವದ ನ್ಯಾಯಾಧೀಕರಣ 2004ರ ಎಪ್ರಿಲ್ 2 ರಿಂದ ಕಾರ್ಯಾರಂಭ ಮಾಡಿದೆ.
ಈ ನ್ಯಾಯಾಧೀಕರಣ ಅವಧಿ ಮುಗಿದರೂ, ವಾದ-ವಿವಾದ ಇನ್ನೂ ಪೂರ್ಣಗೊಂಡಿಲ್ಲ ಎಂಬ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಇದರ ಅವಧಿಯನ್ನು ಮುಂದೂಡಲಾಗಿದೆ. ಕೇಂದ್ರ ಸರಕಾರವು ಅಂತಿಮ ಗಡುವು ವಿಧಿಸಿರುವುದರಿಂದ ಡಿ.30ರಂದು ಅಂತಿಮ ತೀರ್ಪು ಹೊರಬರಲಿದೆ. ನೀರು ಹಂಚಿಕೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ನಡುವೆ1969ರಿಂದ ತಿಕ್ಕಾಟವಿದೆ.
Comments
ಬಾಗಲಕೋಟಿ ಕೃಷ್ಣಾ ನ್ಯಾಯಾಧೀಕರಣ ತೀರ್ಪು ಉತ್ತರ ಕರ್ನಾಟಕ ಆಲಮಟ್ಟಿ bagalkot krishna water panel verdict north karnataka alamatti dam
English summary
The Justice Brijesh Kumar Tribunal constituted six years ago to consider fresh claims among Krishna River riparian states, Andhra Pradesh, Karnataka and Maharashtra, will deliver its verdict on Thursday in New Delhi.
Story first published: Thursday, December 30, 2010, 9:42 [IST]