ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿಕನ್ ಕರಿ ಮಾಡದ ಪತ್ನಿ ಕೊಂದ ಕುಡುಕ ಪಾಪಿ
ನಗರದ ನಾಗಮ್ಮ ನಗರ ನಿವಾಸಿ ಕಲಾವತಿ(38)ಮೃತಪಟ್ಟಿರುವ ದುರ್ದೈವಿ. ಆಕೆಯ ಗಂಡ ರಾಜು(42)ಕೊಲೆ ಆರೋಪಿ. ರಾಜು ಮತ್ತು ಕಲಾವತಿಗೆ ವಿವಾಹವಾಗಿ 21ವರ್ಷಗಳಾಗಿದ್ದವು. ಇವರಿಗೆ ಮೂರು ಮಕ್ಕಳಿದ್ದು, ಇವರು ಕೆ.ಪಿ.ಅಗ್ರಹಾರದ ಬಿನ್ನಿ ಮಿಲ್ ಕ್ಯಾಂಟೀನ್ ಹಿಂಭಾಗ ನಾಗಮ್ಮ ನಗರದಲ್ಲಿ ವಾಸವಾಗಿದ್ದರು. ಆರೋಪಿ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಹಿಂದಿರುಗುತ್ತಿದ್ದನು. ಈ ಸಂಬಂಧ ಪತಿ ಮತ್ತು ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ರೀತಿ ರಾಜು ಮದ್ಯಪಾನ ಮಾಡಿ ಶನಿವಾರ ರಾತ್ರಿ ಮನೆಗೆ ಹಿಂದಿರುಗಿ, ಚಿಕನ್ ಕರ್ರಿ ಮಾಡಿಕೊಡುವಂತೆ ಕೇಳಿದ್ದಾನೆ. ಇದಕ್ಕೆ ಆತನ ಪತ್ನಿ ಒಪ್ಪದಿದ್ದಾಗ ಇಬ್ಬರ ನಡುವೆ ಜಗಳ ಉಂಟಾಗಿ ರಾಜು ತನ್ನ ಪತ್ನಿಯ ಕುತ್ತಿಗೆ ಮತ್ತು ಹೊಟ್ಟೆ ಮೇಲೆ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದನು. ಇದರಿಂದ ರಕ್ತ ವಾಂತಿ ಮಾಡಿಕೊಂಡ ಆಕೆ, ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. [ಕೊಲೆ]
Comments
English summary
A drunken man kills wife for not cooking chicken curry in time. Kalavati(38) was beaten to death by her husband Raju in KP Agrahara, Nagamma Nagar, Bengaluru.
Story first published: Monday, December 27, 2010, 14:35 [IST]