ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅನಂತ್ ರಾಜೀನಾಮೆಗೆ ಪರಮೇಶ್ವರ್ ಆಗ್ರಹ
ಹೆಬ್ಬಾಳ ಕೃಷಿ ವಿವಿಯ ಆವರಣದಲ್ಲಿ ನಡೆದ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘದ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಿದ್ದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು. ಅನಂತ ಕುಮಾರ್ ವಿರುದ್ಧ ಹಿಂದೆ ಕೂಡಾ ಹುಡ್ಕೋ ಹಗರಣದಲ್ಲಿ ಹೆಸರು ಕೇಳಿ ಬಂದಿತ್ತು. ಈಗ ದಲ್ಲಾಳಿ ನೀರಾ ರಾಡಿಯಾ ಜೊತೆ ಸಂಬಂಧವಿದೆ ಎಂಬ ಆರೋಪವಿದೆ. ಹೀಗಾಗಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪರಮೇಶ್ವರ್ ಒತ್ತಾಯಿಸಿದರು.
ಕೃಷಿ ವಿವಿ ಆವರಣದಲ್ಲಿ ನ್ಯಾಯಾಧೀಶರ ವಸತಿಗೃಹ ನಿರ್ಮಾಣಕ್ಕೆ ಜಮೀನು ನೀಡುವ ಸರಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪರಮೇಶ್ವರ್, ಸರಕಾರ ನೀಡಲು ಮುಂದಾದರೆ ವಿವಿಯ ಹಳೆ ವಿದ್ಯಾರ್ಥಿಯಾಗಿ ತಾನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸರಕಾರಕ್ಕೆ ಜಮೀನಿನ ಅಗತ್ಯವಿದ್ದರೆ ಬಿಜೆಪಿ ನಾಯಕರು ಅಕ್ರಮವಾಗಿ ಹಲವು ಎಕರೆ ಡಿನೋಟಿಫಿಕೇಶನ್ ಮಾಡಿಕೊಂಡಿರುವ ಜಮೀನನ್ನು ನೀಡಲಿ ಎಂದು ಟೀಕೆಸಿದರು.(ಅನಂತ್ ಕುಮಾರ್)
Comments
English summary
The KPCC president G Parameshwara demanded the immediate resignation of BJP MP Ananth Kumar, following reports that he had allegedly given classified information to Niira Radia, when he was Union minister during the NDA regime.
Story first published: Sunday, December 26, 2010, 16:13 [IST]