ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಯ್ಡು ಸ್ಥಿತಿ ಗಂಭೀರ, ಉಪವಾಸ ಕುಂತ ಜಗನ್
ಕಳೆದ ವರ್ಷ ಮಳೆಯಿಂದಾಗಿ ಆಂಧ್ರಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಉಕ್ಕಿ ರೈತರು ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ಆದರೆ, ರಾಜ್ಯ ಸರಕಾರ ಸಂತ್ರಸ್ಥರ ಕಡೆಗೆ ಗಮನ ಹರಿಸದಿರುವುದನ್ನು ಖಂಡಿಸಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ನಿಜಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಬು ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಂತ್ರಸ್ಥ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಇನ್ನೊಂದಡೆ ಇದೇ ಕಾರಣಕ್ಕೆ ಕಾಂಗ್ರೆಸ್ ರೆಬೆಲ್ ನಾಯಕ ಜಗನ್ ಕೂಡಾ ಉಪವಾಸ ಆರಂಭಿಸಿದ್ದಾರೆ, ಜಗನ್ ಅವರ ಉಪವಾಸ ಸತ್ಯಾಗ್ರಹಕ್ಕೆ ಕಾಂಗ್ರೆಸ್ ಸುಮಾರು 25 ಶಾಸಕರು ಮತ್ತು ಸಂಸದರು ಬೆಂಬಲ ವ್ಯಕ್ತಪಡಿಸಿರುವುದು ವಿಶೇಷ.(ಆಂಧ್ರಪ್ರದೇಶ)
ಆಂಧ್ರ ಪ್ರದೇಶ ಚಂದ್ರಬಾಬು ನಾಯ್ಡು ಜಗನ್ಮೋಹನ್ ರೆಡ್ಡಿ ಉಪವಾಸ ಸತ್ಯಾಗ್ರಹ ಕಿರಣ್ ಕುಮಾರ್ ರೆಡ್ಡಿ andhra pradesh chandrababu naidu hunger strike
English summary
In Andhra Pradesh, the two political leaders, who started their hunger strike with demand of high compensation for the farmers of the state, continued their protest. While support for one has been swelled, others health condition deteriorated.
Story first published: Thursday, December 23, 2010, 15:38 [IST]