ಹರಿಜನ ಪದ್ಮಮ್ಮ ಮತ್ತಿತರರಿಗೆ ನಾಡೋಜ ಗೌರವ
ಈ ಪದವಿ ಪ್ರದಾನ ಸಮಾರಂಭದಲ್ಲಿ ನುಡಿಹಬ್ಬ 19ನೇ ಘಟಿಕೋತ್ಸವ ಭಾಷಣ ಮಾಡಿದ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಾಂಕ ಪರಿಷತ್ತಿನ ನಿರ್ದೇಶಕರಾದ ಪ್ರೊ. ಎಚ್.ಎ.ರಂಗನಾಥ, ಕುಲಪತಿ ಡಾ. ಎ. ಮುರಿಗೆಪ್ಪ, ಕುಲಸಚಿವ ಡಾ. ಮಂಜುನಾಥ ಬೇವಿನಕಟ್ಟಿ, ಡೀನ್ಗಳಾದ ಡಾ. ರಹಮತ್ ತರಿಕೆರೆ, ಟಿ.ಆರ್. ಚಂದ್ರಶೇಖರ್, ಡಾ. ಎಚ್.ಎಸ್. ಪಾಟೀಲ್ ಹಾಗೂ ಉಪ ಕುಲಸಚಿವರು, ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.
ರಾಜ್ಯಪಾಲ ಹಾಗೂ ಕುಲಾಧಿಪತಿಗಳಾಗಿರುವ ಹಂಸರಾಜ್ ಭಾರದ್ವಾಜ್ ಗೈರು ಹಾಜರಿಯಲ್ಲಿ ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯರೇ ಪ್ರಶಸ್ತಿ ಪ್ರದಾನ ಮಾಡಿದರು. ಆರಂಭದಲ್ಲಿ ಕುಲಪತಿ ಡಾ. ಎ.ಮುರಿಗೆಪ್ಪ ಸ್ವಾಗತಿಸಿದರು. ವಿ.ಎಸ್.ಆಚಾರ್ಯ ಅವರೇ ಡಿ.ಲಿಟ್ ಪದವಿಗಳನ್ನು ಸಹ ಪ್ರದಾನ ಮಾಡಿದರು.
ಆರಂಭದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ನಾಡೋಜ ಪದವಿ ಪಡೆದವರನ್ನು ಹಾಗೂ ಗಣ್ಯರನ್ನು ಕರೆತರಲಾಯಿತು. ನಾಡೋಜ ಪದವಿಗೆ ಪಾತ್ರರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಖ್ಯಾತ ಹಿನ್ನೆಲೆ ಗಾಯಕ ಡಾ. ಪಿ.ಬಿ. ಶ್ರೀನಿವಾಸ್ ಗೈರು ಹಾಜರಾಗಿದ್ದರು. ಅವರ ಮನೆಗೆ ತೆರಳಿ ನಾಡೋಜ ಪದವಿ ಗೌರವ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ. ಎ.ಮುರಿಗೆಪ್ಪ ಅವರು ಹೇಳಿದರು.