ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರಿಬ್ಬರೂ ರಾಜಕೀಯದಿಂದ ನಿವೃತ್ತಿ ಆಗೋಲ್ಲ

By Mrutyunjaya Kalmat
|
Google Oneindia Kannada News

Deve Gowda and Bangarappa
ಬೆಂಗಳೂರು, ಡಿ. 15 : ದೇವೇಗೌಡರು ಮತ್ತು ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಇಂದು ಇಲ್ಲಿ ಹೇಳಿದರು.

ಜಾತ್ಯತೀತ ಜನತಾದಳ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ವಯಸ್ಸಿಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ನಾನಾಗಲೀ, ದೇವೇಗೌಡರಾಗಲೀ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಬಂಗಾರಪ್ಪ ಸಾರಿ ಹೇಳಿದರು

ದೇವೇಗೌಡರು ಮತ್ತು ನಾನು ಸಮಕಾಲೀನ ರಾಜಕಾರಣಿಗಳು. ತತ್ವ ಸಿದ್ಧಾಂತಗಳು ಒಂದೇ. ಆದರೆ, ಈವರೆಗೂ ಬೇರೆ ಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದೇವೆ. ಜಾತ್ಯತೀತ ನಿಲುವು ಹೊಂದಿರುವ ನಾವುಗಳು ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಸರಕಾರದ ಅನಾಚಾರಗಳ ವಿರುದ್ಧ ಹೋರಾಟ ನಡೆಸಬೇಕಿದೆ. ಹಿಂದುಳಿದ ವರ್ಗಗಳ ನಾಯಕನಾಗಿರುವ ನನ್ನನ್ನು ಕಾಂಗ್ರೆಸ್ ಪಕ್ಷ ಬಳಸಿಕೊಂಡು ಮೂಲೆಗುಂಪು ಮಾಡಿದೆ ಎಂದು ಸಿಟ್ಟಾದರು.

ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದ ಕೂಪವಾಗಿದೆ. ಮುಖ್ಯಮಂತ್ರಿಯೇ ಸರಕಾರಿ ಭೂಮಿಯನ್ನು ಡಿನೋಟಿಫೈ ಮಾಡಿರುವುದು ಖಂಡನೀಯ. ಇದರ ವಿರುದ್ಧ ಹೋರಾಟ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಜಯ ದೊರೆಯುವುದು ನಿಶ್ಚಿತ. ರಾಜ್ಯದಲ್ಲಿ ನಿಜವಾದ ಪ್ರತಿಪಕ್ಷವೆಂದರೆ ಅದು ಜೆಡಿಎಸ್ ಎಂದು ಬಂಗಾರಪ್ಪ ಹೇಳಿದರು.

English summary
Never Say Die : Septuagenarians S Bangarappa and HD Deve Gowda see no reason why one should retire from active politics. Aging has nothing to do with a politician who aims to serve people. Former Chief Minister and a seasoned defector S Bangarappa today officially joined JD(S) to fight against BJP government and pull down BSY from CMs Chair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X