ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಗ್ಗಡೆ ಸೇರಿ ಐವರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿ
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ, ಹಿನ್ನಲೆ ಗಾಯಕ ಡಾ. ಪಿ ಬಿ ಶ್ರೀನಿವಾಸ್, ಸಂಶೋಧಕ ಡಾ. ಎಂ ಎಂ ಕಲ್ಬುರ್ಗಿ, ಬಳ್ಳಾರಿ ಜಿಲ್ಲೆಯ ಜನಪದ ಕಲಾವಿದೆ ಹರಿಜನ ಪದ್ಮಮ್ಮ ಅವರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿವಿ ಕುಲಪತಿ ಡಾ. ಮಂಜುನಾಥ ಬೇವಿನಕಟ್ಟಿ ತಿಳಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯವು ಕಳೆದ ಹತ್ತೊಂಬತ್ತು ವರ್ಷಗಳಿಂದ ತನ್ನ ನುಡಿಹಬ್ಬದ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿಗಳನ್ನು ಗುರುತಿಸಿ ಪ್ರತಿಷ್ಠಿತ ನಾಡೋಜ ಗೌರವಪದವಿಯನ್ನು ನೀಡುತ್ತಾ ಬಂದಿದೆ. ಒಂಭತ್ತು ವರ್ಷಗಳಿಂದ ನುಡಿಹಬ್ಬದಲ್ಲಿ "ನಾಡೋಜ" ಗೌರವ ಪದವಿಯನ್ನು ಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ. ಡಿ. 21 ರಂದು ನಡೆಯುವ ಘಟಿಕೋತ್ಸವದಲ್ಲಿ ನ್ಯಾಕ್ ನ ನಿರ್ದೇಶಕ ಡಾ. ಎಚ್.ರಂಗನಾಥ್ ಭಾಗವಹಿಸಲಿದ್ದಾರೆ ಎಂದು ಮಂಜುನಾಥ ಬೇವಿನಕಟ್ಟಿ ತಿಳಿಸಿದರು.
Comments
ಕನ್ನಡ ವಿಶ್ವವಿದ್ಯಾಲಯ ನಾಡೋಜ ವೀರೇಂದ್ರ ಹೆಗ್ಗಡೆ ಪಿಬಿ ಶ್ರೀನಿವಾಸ್ nadoja kannada university veerendra heggade pb srinivas
English summary
The Kannada University, Hampi, has selected Veerendra Heggade, research scholar M.M. Kalburgi, writer Baragur Ramachandrappa, playback singer P.B. Srinivos and artist Harijana Padmamma for the "Nadoja Award".
Story first published: Thursday, December 9, 2010, 11:02 [IST]