ವೆಬ್ ಸೈಟಿನಲ್ಲಿ ವೇದಾಂತ ಪಾಠ ಬೇಕೇನು
ವಿದ್ಯೆಯನ್ನು, ಜ್ಞಾನವನ್ನು, ಶಾಂತಿ ಸಮಾಧಾನಗಳನ್ನು ಗುರುಕುಲ ಕ್ರಮದಿಂದ ಅಧ್ಯಯನ ಮಾಡುವುದಕ್ಕೆ ಇವತ್ತು ಯಾರಿಗೂ ಪುರುಸೊತ್ತಿಲ್ಲ. ಅಂಥ ವಾತಾವರಣವೂ ಇಲ್ಲ. ಇಂದಿನ ಯುಗ ಕಂಪ್ಯೂಟರ್ ಯುಗ. ಕಳ್ಳಕಾಕರ ಯುಗ. ದೊರೆಯೇ ಧೂರ್ತನಾಗುವ ಯುಗ. ವೈಜ್ಞಾನಿಕ ಯುಗ. ವೇಗದ ಯುಗ. ಆವೇಗದ ಯುಗ. ಉದ್ವೇಗದ ಯುಗ. ಪ್ರಮುಖವಾಗಿ ಈಗಿನ ಯುವಕ ಯುವತಿಯರು, ಮಧ್ಯವಯಸ್ಕರು ಮತ್ತು ಹಿರಿಯ ನಾಗರಿಕರು ಐಹಿಕ ಸುಖಕ್ಕೆ ಮತ್ತು ವಸ್ತು ಭೋಗಕ್ಕೆ ತುತ್ತಾಗಿ ಬಳಲಿದ್ದಾರೆ. ತಮ್ಮನ್ನು ಕಾಡುತ್ತಿರುವ ಕಾಯಿಲೆ ಯಾವುದು ಎನ್ನುವುದು ನರಳುತ್ತಿರುವ ವ್ಯಕ್ತಿಗೇ ತಿಳಿಯದಾಗಿದೆ.
ಇದನ್ನು ಗಮನದಲ್ಲಿ ಇಟ್ಟುಕೊಂಡು "ವೇದಾಂತ ಸತ್ಸಂಗ ಕೇಂದ್ರ"ದ ವತಿಯಿಂದ "ಶಂಕರಹೃದಯಂ" ಎಂಬ ಅಂತರ್ಜಾಲ ತಾಣವನ್ನು ತೆರೆಯಲಾಗುತ್ತಿದೆ. ವೇದಾಂತ ಪಾಠಗಳನ್ನು ಪ್ರಚುರ ಪಡಿಸುವುದು ಈ ವೆಬ್ ಸೈಟಿನ ಉದ್ದೇಶವಾಗಿರುತ್ತದೆ. ಬರುವ ಭಾನುವಾರ 12 ಡಿಸೆಂಬರ್ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಶಂಕರಪುರದ ಶೃಂಗೇರಿ ಶಂಕರಮಠದಲ್ಲಿ ಡಾ. ಎಸ್. ರಂಗನಾಥ್ ಅವರು ಈ ತಾಣಕ್ಕೆ ಚಾಲನೆ ನೀಡಲಿದ್ದಾರೆ. ಅಂತರ್ಜಾಲಕ್ಕೆ ಮಹಾಮಹೋಪಾಧ್ಯಾಯ ವಿದ್ವಾನ್ ಕೆ.ಜಿ.ಸುಬ್ರಾಯ ಶರ್ಮರು ಪ್ರಧಾನ ಆಚಾರ್ಯರಾಗಿರುತ್ತಾರೆ.
ಶೃಂಗೇರಿ
ಮಹಾಸಂಸ್ಥಾನದ
ಗೌರವ
ಆಡಳಿತಾಧಿಕಾರಿ
ವಿ.ಆರ್.
ಗೌರೀಶಂಕರ್
ರವರು
ಸಮಾರಂಭದ
ಅಧ್ಯಕ್ಷತೆ
ವಹಿಸುತ್ತಾರೆ.
ಸಿ.ಏ.ಸಂಜೀವ
ಮೂರ್ತಿಗಳು
ಹಾಡಿರುವ,
ಹೊಳೆನರಸೀಪುರದ
ಶ್ರೀ
ಸಚ್ಚಿದಾನಂದೇಂದ್ರ
ಸರಸ್ವತೀ
ಸ್ವಾಮಿಗಳು
ಕನ್ನಡದಲ್ಲಿ
ರಚಿಸಿರುವ
ಹಾಡುಗಳ
"ಶ್ರೀ
ಶಂಕರವಚನ
ಗಾನ
ರಸಾಯನ
"
ಎಂಬ
ಸಿ.ಡಿ
ಯನ್ನೂ
ಲೋಕಾರ್ಪಣೆ
ಮಾಡುವವರಿದ್ದಾರೆ.(
ಸಿ.ಡಿ.ಬೆಲೆ
ರೂ.80
).
ವೆಬ್
ಸೈಟ್
ವಿಳಾಸ
:
http://www.satchidanandendra.org
ಶಂಕರ
ಭಗವತ್ಪಾದರು
ತೋರಿದ
ಆದರ್ಶಗಳನ್ನು
ಮನಸಾ
ಮೆಚ್ಚುವವರು
ಮತ್ತು
ನೆಮ್ಮದಿ
ಅರಸುತ್ತಿರುವವರು
ಈ
ತಾಣದ
ಪ್ರಯೋಜನ
ಪಡೆಯಬಹುದೆಂದು
ವೇದಾಂತ
ಸತ್ಸಂಗ
ಕೇಂದ್ರದ
ಪತ್ರಿಕಾ
ಪ್ರಕಟಣೆ
ತಿಳಿಸಿದೆ.
ಹೆಚ್ಚಿನ
ವಿವರಗಳಿಗೆ
:
98860
51222
ದೂರವಾಣಿ
ಸಂಖ್ಯೆಯನ್ನು
ತಲುಪಿರಿ.
ಇಮೇಲ್
:
[email protected]