ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಟ್ಟಾ ವಿರುದ್ಧ ಶೀಘ್ರ ಚಾರ್ಜ್ ಶೀಟ್
ಬೆಂಗಳೂರು ವಕೀಲರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಗರಣದ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತನಿಖೆಗೆ ಸಂಪೂರ್ಣ ಸಹಕರಿಸುತ್ತಾರೆ ಎಂಬ ವಿಶ್ವಾಸ ಇದೆ. ತನಿಖೆ ಸುಮಾರು ಮುಕ್ಕಾಲು ಭಾಗ ಮುಗಿದಿದೆ. ಬಾಕಿ ತನಿಖೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ಮುಂದುವರಿದಿದ್ದಾರೆ ಎಂದರು.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತನಿಖೆಗೆ ಸಹಕರಿಸಲ್ಲ ಅಥವಾ ತಲೆಮರೆಸಿಕೊಳ್ಳುತ್ತಾರೆ ಎಂಬ ಸೂಚನೆಗಳು ಸಿಕ್ಕಲ್ಲಿ ಅವರನ್ನು ಬಂಧಿಸುವ ಮತ್ತು ಪಾಸ್ ಪೋರ್ಟ್ನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು. ಸದ್ಯ ಅಂಥ ಯಾವ ಸ್ಥಿತಿಯೂ ಉದ್ಭವಿಸಿಲ್ಲ ಎಂದು ಸಂತೋಷ ಹಗ್ಡೆ ಸ್ಪಷ್ಟಪಡಿಸಿದ್ದಾರೆ.
Comments
ಕಟ್ಟಾ ಸುಬ್ರಮಣ್ಯ ನಾಯ್ಡು ಸಂತೋಷ್ ಹೆಗ್ಡೆ ಚಾರ್ಜ್ ಶೀಟ್ ಯಡಿಯೂರಪ್ಪ ಕಟ್ಟಾ ಜಗದೀಶ್ katta subramanya naidu santosh hegde chargesheet yediyurappa katta jagadish
English summary
The Lokayukta Justice N Santosh Hegde said that charge sheet against former minister Katta Subramanya Naidu, his son Katta Jagadish and those involved in the land scam will be filed at the earliest.
Story first published: Sunday, December 5, 2010, 11:21 [IST]