ಶಿವಮೊಗ್ಗ ಅಕ್ರಮ ದೇಗುಲಗಳ ತೆರವಿಗೆ ಡೆಡ್ಲೈನ್: ಪೊನ್ನುರಾಜ್
ಸುಪ್ರೀಂಕೋರ್ಟ್ನ ಆದೇಶ ದಂತೆ 2009ಕ್ಕೂ ಪೂರ್ವದಲ್ಲಿ ರಸ್ತೆ ಮಧ್ಯೆ, ಪಕ್ಕ ಇಲ್ಲವೇ ಉದ್ಯಾನ ವನಗಳಲ್ಲಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳಿಂದ ಸಾರ್ವಜಕರಿಗೆ ತೊಂದರೆಯಾಗುತ್ತಿದ್ದರೆ ಡಿ.15 ರೊಳಗೆ ಅವುಗಳನ್ನು ತೆರವು ಮಾಡಬೇಕು. ಇಲ್ಲದಿದ್ದರೆ ಇದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ 38 ಪ್ರಾರ್ಥನಾ ಮಂದಿರಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಇವುಗಳ ಪೈಕಿ ಕೇವಲ 15ಕ್ಕೆ ಮಾತ್ರ ಸಂಬಂಧ ಪಟ್ಟವರು ಉತ್ತರ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಪ್ರತಿ ತಾಲೂಕುಗಳಲ್ಲಿಯೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಸಾರ್ವಜನಿಕರಿಂದ ಅನಧಿಕೃತ ಪ್ರಾರ್ಥನಾ ಮಂದಿರಗಳಿಗೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಲಿದ್ದಾರೆ. ಈ ವಿಷಯದಲ್ಲಿ ಸಾರ್ವಜನಿಕರು ಯಾವುದೇ ಭಾವಾವೇಶಕ್ಕೆ ಒಳಗಾಗದೇ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಒಂದು ವೇಳೆ ಸಾರ್ವಜನಿಕರು ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವಿಗೆ ಸಹಕರಿಸಿದರೆ ಅವರು ಸೂಚಿಸುವ ಸ್ಥಳ ಯೋಗ್ಯವಾಗಿದ್ದರೆ ಅಲ್ಲಿ ನೂತನವಾಗಿ ಧಾರ್ಮಿಕ ಮಂದಿರಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗು ವುದು. ಇದರಿಂದ ಪ್ರಾರ್ಥನಾ ಮಂದಿರದ ಜೀರ್ಣೋಧ್ದಾರವೂ ಅದಂತಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.