ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸ್ವದೇಶಿ ಚಳವಳಿ ಹರಿಕಾರ ರಾಜೀವ್ ದೀಕ್ಷಿತ್ ಅಸ್ತಂಗತ
ಭಾರತೀಯತೆಯಲ್ಲಿ ಬಲವಾದ ನಂಬಿಕೆ ಇಟ್ಟುಕೊಂಡು ಪ್ರಚಾರ ನಡೆಸುತ್ತಿದ್ದ ರಾಜೀವ್, ಭಾರತದ ಚರಿತ್ರೆ, ಸಂವಿಧಾನ ಹಾಗೂ ಆರ್ಥಿಕ ನೀತಿಗಳಲ್ಲಿನ ಲೋಪ ದೋಷಗಳನ್ನು ಜನರ ಮುಂದೆ ಮಂಡಿಸುತ್ತಿದ್ದರು. ಜನ ಸಾಮಾನ್ಯರು ಸ್ವದೇಶಿ ವಸ್ತುಗಳ ಬಳಸುವುದರಿಂದ ದೇಶಕ್ಕೆ ಆಗುವ ಲಾಭದ ಬಗ್ಗೆ ಹಲವಾರು ಪ್ರವಚನಗಳನ್ನು ನೀಡಿದ್ದರು. ಸ್ವದೇಶಿ ಚಳವಳಿ ಹಾಗೂ ಆಜಾದಿ ಬಚಾವ್ ಆಂದೋಳನಗಳ ಮೂಲಕ ಜನತೆಯಲ್ಲಿ ದೇಶಪ್ರೇಮದ ಕಿಡಿ ಹಚ್ಚಿದರು.
ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಜನಿಸಿದ ರಾಜೀವ್ ದೀಕ್ಷಿತ್, ಆರಂಭದಿಂದಲೇ ಹೋರಾಟ ಮನೋಭಾವವನ್ನು ಬೆಳಸಿಕೊಂಡಿದ್ದರು. ಮಾಜಿ ರಾಷ್ಟ್ರಪತಿ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರೊಡನೆ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಫ್ರಾನ್ಸ್ ನಲ್ಲಿ ದೂರಸಂಪರ್ಕ ಇಲಾಖೆಯಲ್ಲೂ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಕಳೆದ 20 ವರ್ಷಗಳಿಂದ ಸ್ವದೇಶಿ ಚಳವಳಿಯಲ್ಲಿ ತೊಡಗಿಕೊಂಡು, ವಿದೇಶಿ ಕಂಪೆನಿಗಳ ಹುನ್ನಾರವನ್ನು ಬಯಲು ಮಾಡಿ, ಜನತೆಗೆ ಅರಿವು ಮೂಡಿಸಲು ಶ್ರಮಿಸಿದ್ದರು.
Comments
English summary
Rajiv Dixit demise last night, He was one of the leaders of Modern swadeshi movement. Currently he was working as National Secretory of Bharat Swabhiman Andolan started by Baba Ramdev. Rajiv was strong believer and preacher of Bharatiyata(Indianism). He was also a scientist, orator lead many movements against corruption.
Story first published: Wednesday, December 1, 2010, 10:50 [IST]