ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಹಗರಣದಲ್ಲಿ ಆರೆಸ್ಸೆಸ್ ಪಾಲು..!

By Mrutyunjaya Kalmat
|
Google Oneindia Kannada News

VS Ugrappa
ಕಾಪು, ನ. 22 : ಭೂಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆರೆಸ್ಸೆಸ್ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನ ವಹಿಸಿದೆ. ಹಗರಣದಲ್ಲಿ ಆರೆಸ್ಸೆಸ್‌ ಗೂ ಪಾಲು ಇರುವುದರಿಂದ ಅವರು ಈ ಬಗ್ಗೆ ಬಾಯಿ ಮುಚ್ಚಿ ಕುಳಿತಿದ್ದಾರೆ ಎಂದು ಮಾಜಿ ವಿರೋಧ ಪಕ್ಷ ನಾಯಕ ವಿ ಎಸ್ ಉಗ್ರಪ್ಪ ಆರೋಪಿಸಿದ್ದಾರೆ.

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಪು ಪೇಟೆಯಲ್ಲಿ ಆಯೋಜಿಸಲಾದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ದಡ್ಡ, ಲಜ್ಜೆಗೆಟ್ಟ, ಭ್ರಷ್ಟ, ಸಮಯಸಾಧಕ, ಲೂಟಿಕೋರ ಮುಖ್ಯಮಂತ್ರಿ ಎಂದು ಉಗ್ರಪ್ಪ ಕಿಡಿಕಾರಿದರು. ಭೂಹಗರಣ ಇದೇ ರೀತಿ ಮುಂದುವರಿದರೆ ಮುಂದೆ ಯಡಿಯೂರಪ್ಪ ವಿಧಾನಸೌಧವನ್ನು ಕೂಡ ತನ್ನ ಮಕ್ಕಳ ಹೆಸರಿಗೆ ಡಿನೋಟಿಫೈ ಮಾಡಬಹುದು ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X