ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇಕ್ ನೀಡಿ ಪ್ರಜ್ಞೆ ತಪ್ಪಿಸಿ ನಗ-ನಗದು ಲೂಟಿ
ಕಳಂಜಗ್ರಾಮ ಮಾವಿನಡಿ ಮನೆ ನಿವಾಸಿ ಲಿಂಗಪ್ಪ ಗೌಡರ ಪುತ್ರಿ ಹೇಮಾವತಿ(23) ಎಂಬ ಯುವತಿಯೇ ಮೋಸಕ್ಕೀಡಾದವರು. ಆಕೆ ಮನೆಯಲ್ಲಿ ಒಂಟಿಯಾಗಿರುವ ಸಮಯ ನೋಡಿದ ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ನಿವಾಸಿ ಶಶಿ ಕುಮಾರ್ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಕೇಕ್ ನೀಡಿ ಮನೆಯಲ್ಲಿದ್ದ ಹತ್ತು ಪವನ್ ಚಿನ್ನ ಹಾಗೂ ಒಂದು ಲಕ್ಷ ನಗದನ್ನು ಹಾಡು-ಹಗಲೇ ದೋಚಿ ಪರಾರಿಯಾಗಿದ್ದಾನೆ.
ವಿಷಯುಕ್ತ ಕೇಕ್ ತಿಂದ ಹೇಮಾವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗಲೇ ಆಕೆಯ ಮೈಮೇಲಿದ್ದ ಒಡವೆಗಳನ್ನು ಕಳಚಿದ್ದಾಳೆ. ಶಶಿ ಮಾಡುತ್ತಿರುವ ದುಷ್ಕೃತ್ಯದ ಅರಿವು ಉಂಟಾದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಹೇಮಾ, ನಂತರ ವಾಂತಿ ಮಾಡಿಕೊಂಡು ಬೊಬ್ಬೆ ಹಾಕತೊಡಗಿದಾಗ, ನೆರೆಮನೆಯವರು ಬಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಈ ಕಳವು ಪ್ರಕರಣದ ತನಿಖೆಯನ್ನು ಮಾಡುತ್ತಿದ್ದಾರೆ.
Comments
ಕ್ರೈಂ ಕಳ್ಳತನ ಕೇಕ್ ವಿಷಾಹಾರ ಯುವತಿ ಮದುವೆ ಆಭರಣ ಚಿನ್ನ ಪುತ್ತೂರು ಬೆಳ್ತಂಗಡಿ ಉಪ್ಪಿನಂಗಡಿ cake young girl marriage robbery gold crime beat puttur beltangady uppinangadi
Story first published: Wednesday, November 17, 2010, 17:24 [IST]