ದೆಹಲಿಯಲ್ಲಿ ಕಟ್ಟಡ ಕುಸಿತ 60ಕ್ಕೂ ಹೆಚ್ಚು ಸಾವು
ಇಲ್ಲಿನ ಲಕ್ಷ್ಮಿ ನಗರದ ಲಲಿತಾ ಪಾರ್ಕ್ ಎಂಬಲ್ಲಿ ರಾತ್ರಿ 8.15ರ ಸಮಯದಲ್ಲಿ ಈ ದುರ್ಘಟನೆಸಂಭವಿಸಿದೆ.ದುರಂತದಲ್ಲಿ ಈವರೆಗೂ 60 ಜನರನ್ನು ರಕ್ಷಿಸಲಾಗಿದೆ.ಬದುಕುಳಿದಿರುವವರನ್ನು ರಕ್ಷಿಸಲು ಕಾರ್ಯಾಚರಣೆ ಸಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ವಾಲಿಯಾ ತಿಳಿಸಿದ್ದಾರೆ. ಸುಮಾರು 15 ವರ್ಷ ಹಳೆಯದಾಗಿದ್ದ ಈ ಕಟ್ಟಡವು ಈ ಬಾರಿಯ ಮಳೆಗಾಲದಲ್ಲಿ ಸಾಕಷ್ಟು ಶಿಥಿಲಗೊಂಡಿತ್ತು. ಅಷ್ಟೇ ಅಲ್ಲದೆ ಯಮುನಾ ನದಿಯ ಪ್ರವಾಹದಿಂದಲೂ ಕಟ್ಟಡಕ್ಕೆ ಹಾನಿಯುಂಟಾಗಿತ್ತು.ಇದರಿಂದಾಗಿ ಕಟ್ಟಡ ಕುಸಿದು ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳೀಯರ ಪ್ರಕಾರ ನೆಲ ಮಾಳಿಗೆಯಲ್ಲಿ ಇನ್ನೂ ನೀರು ನಿಂತಿತ್ತು. ಅಲ್ಲದೇ ಈ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ಕಟ್ಟಡವನ್ನು ಇನ್ನು ಎತ್ತರಿಸುವ ಕಾರ್ಯ ನಡೆಯುತ್ತಿತ್ತು.ಗಾಯಗೊಂಡಿರುವವರಲ್ಲಿ ಬಹುತೇಕ ಮಂದಿ ಕೂಲಿಯಾಳುಗಳು ಎನ್ನಲಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಮತ್ತು ಕ್ರೇನ್ಗಳ ಅಲಭ್ಯದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನೆಲಮಾಳಿಗೆಯಲ್ಲಿದ್ದ ನೀರನ್ನು 2ತಿಂಗಳಾದರೂ ಹೊರ ಹಾಕದೆ ನಿರ್ಲಕ್ಷ್ಯ ತೋರಲಾಗಿದೆ. ಈ ಕಟ್ಟಡವನ್ನು ಅನಧಿಕೃತವಾಗಿ ನಿರ್ಮಿಸಲಾಗಿತ್ತೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಎಂದು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.