ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರಕಾರವೆಂದರೆ ಕುಟುಂಬ ವ್ಯವಹಾರವಲ್ಲ : ಸಿದ್ದು
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಯಡಿಯೂರಪ್ಪನವರ ಕುಟುಂಬದವರೆಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯವನ್ನೇ ಕೊಳ್ಳೆ ಹೊಡೆಯಲು ಹೊರಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಯನ್ನು ಮರೆತು ಕಾನೂನು ಉಲ್ಲಂಘಿಸಿ ತನ್ನ ಕುಟುಂಬದವರಿಗೆ ಬೇಕಾದ ಎಲ್ಲ ರೀತಿಯ ಸಹಾಯ, ಸಹಕಾರವನ್ನು ನೀಡುತ್ತಿದ್ದಾರೆ ಎಂದು ದೂರಿದರು.
ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ ಯಡಿಯೂರಪ್ಪ ಸರಕಾರ ಎಂದರೆ ಗೋಲಿ ಆಟ ಎಂದು ಭಾವಿಸಿದಂತಿದೆ. ಸರಕಾರ ಎಂದರೆ ಅವರ ಮನೆಯ ವ್ಯವಹಾರವಲ್ಲ. ಇದು ಪ್ರಜಾಪ್ರಭುತ್ವ ಎಂಬುದನ್ನು ಮೊದಲು ಅವರು ಅರಿತುಕೊಳ್ಳಲಿ ಎಂದು ಸಲಹೆ ನೀಡಿದರು.
Comments
ಸಿದ್ದರಾಮಯ್ಯ ಯಡಿಯೂರಪ್ಪ ಕಾಂಗ್ರೆಸ್ ಮಹಾರಾಷ್ಟ್ರ ಅಶೋಕ್ ಚವಾಣ್ siddaramaiah yediyurappa denotification congress maharashtra ashok chavan ಡಿನೋಟಿಫೈ ಹಗರಣ scam
English summary
The leader of the opposition in the Assembly, Mr Siddaramaiah, asked the Chief Minister, Mr B.S. Yeddyurappa, to draw a lesson from his Maharashtra counterpart.
Story first published: Monday, November 15, 2010, 11:18 [IST]