ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಕ್ರಿಕೆಟ್ ಅಭಿವೃದ್ಧಿಯೇ ಗುರಿ : ಶ್ರೀನಾಥ್

By Mrutyunjaya Kalmat
|
Google Oneindia Kannada News

Stumps
ಬೆಂಗಳೂರು, ನ. 14 : ಕೆಳಮಟ್ಟದಿಂದ ಬೆಳೆದು ಬಂದಿರುವ ನಾವು ಕ್ರಿಕೆಟ್‌ನ ಪ್ರತಿಯೊಂದೂ ಆಯಾಮಗಳನ್ನು ಚೆನ್ನಾಗಿ ಬಲ್ಲೆವು. ಹಾಗಾಗಿ ಇಂದಿನ ಆಧುನಿಕ ಯುಗದಲ್ಲಿ ವೃತ್ತಿಪರತೆಯ ಅಗತ್ಯವಿದೆ. ಇದರ ಅಭಿವೃದ್ಧಿಗಾಗಿ ಶ್ರಮಿಸುವ ಗುರಿ ನಮ್ಮದಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಹೇಳಿದ್ದಾರೆ.

ಸಾಕಷ್ಟು ಸಂಖ್ಯೆಯ ಉದ್ದಿಮೆಗಳು ಕಾರ್ಪೊರೇಟ್ ಕ್ಷೇತ್ರದಲ್ಲಿ ಛಾಪು ಮೂಡಿಸುವ ಜತೆಗೆ ಕ್ರಿಕೆಟ್ ಜತೆಗೆ ತೀರ ಹತ್ತಿರದ ನಂಟು ಬೆಳೆಸಿಕೊಂಡಿವೆ. ಕಾರ್ಪೊರೇಟ್ ಶೈಲಿಯಂತೆ ಕ್ರಿಕೆಟ್ ನಲ್ಲೂ ವೃತ್ತಿಪರತೆಯ ಅನಿವಾರ್ಯ ಎಂದು ಶ್ರೀನಾಥ್ ಅಭಿಪ್ರಾಯಪಟ್ಟರು. ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನ. 21 ರಂದು ಚುನಾವಣೆ ನಡೆಯಲಿದೆ.

ಶ್ರೀನಾಥ್ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮತ್ತೊಬ್ಬ ಮಾಜಿ ಆಟಗಾರ ಅನಿಲ್ ಕುಂಬ್ಳೆ ಕ್ರಿಕೆಟ್ ಅಭಿವೃಧ್ಧಿಯ ಕುರಿತ ತಮ್ಮ ಯೋಜನೆಗಳ ಬಗ್ಗೆ ಶುಕ್ರವಾರ ಸುದ್ದಿಗಾರರಿಗೆ ವಿವರಿಸಿದರು. ತಮಗೆ ಆಡಳಿತದ ಜ್ಞಾನ ಇಲ್ಲವೆಂದು ಅಸಂಬದ್ಧ ಹೇಳಿಕೆ ಕೊಡುವವರು ಎಂದಿಗೂ ಕ್ರಿಕೆಟ್ ಆಡಿರುವುದಿಲ್ಲ, ಒಬ್ಬನ ಪ್ರೋತ್ಸಾಹ ಸಿಕ್ಕರೂ ಇಡೀ ತಂಡವೇ ಯಶಸ್ಸು ಸಾಧಿಸಬಹುದು ಎಂಬುದು ಬಹುಶಃ ಅವರಿಗೆ ತಿಳಿದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಮುಂದಿನ ಮೂರು ವರ್ಷಗಳ ಅಧಿಕಾರದಲ್ಲಿ ಕರ್ನಾಟಕ ಕ್ರಿಕೆಟ್ ಅನ್ನು ರಾಜ್ಯದ ಮೂಲೆಮೂಲೆಗೂ ಬೆಳೆಸುವ ಆಸೆ ನಮ್ಮದು. ಆ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಕ್ರಿಕೆಟ್‌ಗೆ ಉತ್ತಮ ಸ್ಥಾನ ದೊರಕಿಸಿಕೊಡುವ ಗುರುತರ ಸವಾಲು ನಮ್ಮ ಮೇಲಿದೆ. ಈ ಕನಸು ನನಸಾಗಲು ಎಲ್ಲರ ಪ್ರೋತ್ಸಾಹ ಮತ್ತು ಸಹಕಾರ ಬೇಕು ಎಂದರು.

English summary
A group of former Indian cricketers, including Anil Kumble, Javagal Srinath, Venkatesh Prasad and Roger Binny are attempting to wrest control of the Karnataka State Cricket Association (KSCA). Its an attempt to oust the incumbent governing group headed by politician and erstwhile Maharajah of Mysore Srikantadatta Wodeyar in the November 21 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X