ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೋಕಾಯುಕ್ತರಿಗೆ 15 ದಿನ ಕಂಪ್ಲೀಟ್ ಬೆಡ್ ರೆಸ್ಟ್
ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ, "ಸಂತೋಷ್ ಹೆಗ್ಡೆ ಕಳೆದ ಮಂಗಳವಾರ ಹೃದಯದ ತೊಂದರೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಗ್ರಾಮ್ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅವರು ಶೀಘ್ರದಲ್ಲಿಯೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ. ಆದರೂ ಸದ್ಯದ ಅವರ ಪರಿಸ್ಥಿತಿಯಲ್ಲಿ ಅವರು 15 ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವುದು ಅವಶ್ಯ. ಅವರು ಔಷಧಿಯಿಂದಲೇ ಗುಣಮುಖರಾಗುತ್ತಿರುವುದರಿಂದ ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಬಂದಿಲ್ಲ. ಹಾಗಿದ್ದರೂ 15 ದಿನಗಳ ಕಾಲ ಅವರು ಒತ್ತಡರಹಿತರಾಗಿ ವಿಶ್ರಾಂತಿ ಪಡೆದುಕೊಳ್ಳಬೇಕು" ಎಂದು ವೈದ್ಯರು ಸೂಚಿಸಿದ್ದಾರೆ.
ನ್ಯಾ ಸಂತೋಷ್ ಹೆಗ್ಡೆ 2006 ರ ಆಗಸ್ಟ್ ತಿಂಗಳಲ್ಲಿ ಐದು ವರ್ಷ ಅವಧಿಗೆ ಲೋಕಾಯುಕ್ತರಾಗಿ ನೇಮಕಗೊಂಡಿದ್ದರು. ಇವರ ಈ ಅಧಿಕಾರಾವಧಿಯಲ್ಲಿ ಬಿಜೆಪಿ ಸರ್ಕಾರದ ಅನೇಕ ಹಗರಣಗಳು ಸೇರಿದಂತೆ ಅನೇಕ ಭ್ರಷ್ಟ ಅಧಿಕಾರಗಳ ಅವ್ಯವಹಾರಗಳು ಬೆಳಕಿಗೆ ಬಂದಿದೆ.
Comments
ಸಂತೋಷ್ ಹೆಗ್ಡೆ ಮಣಿಪಾಲ್ ಆಸ್ಪತ್ರೆ ಭ್ರಷ್ಟಾಚಾರ ಅಕ್ರಮ ಗಣಿಗಾರಿಕೆ ಬೆಂಗಳೂರು santosh hegde manipal hospital corruption bengaluru karnataka govt illegal mining
Story first published: Friday, November 12, 2010, 17:44 [IST]