ಪರಿಸರ ಸ್ನೇಹಿ ಯೋಜನೆಗಳಿಗೆ ಸಚಿವ ಸುರೇಶ್ ಚಾಲನೆ
ಸಿಎಫ್ಎಲ್ ಹಾಗೂ ಎಲ್ಇಡಿ ಬಲ್ಬ್ಗಳ ಬಳಕೆಯನ್ನು ಕಡ್ಡಾಯಗೊಳಿಸಲಾಗುವುದು. ಈಗಾಗಲೆ ಸಿಎಫ್ ಎಲ್ ಬಲ್ಬ್ ಅಳವಡಿಕೆಯನ್ನು ಯಶವಿಯಾಗಿ ಜಾರಿಗೊಳಿಸಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸಚಿವರು ಶ್ಲಾಘಿಸಿದರು. ಸಿಎಫ್ಎಲ್ ಹಾಗೂ ಎಲ್ ಇಡಿ ಬಲ್ಬ್ ಗಳ ಬಳಕೆಯಿಂದ ಶೇ. 50 ರಿಂದ 60 ರಷ್ಟು ವಿದ್ಯುತ್ ಉಳಿತಾಯ ಸಾಧ್ಯ. ಬಡವರಿಗೆ ಸಬ್ಸಿಡಿ ದರದಲ್ಲಿ ಸಿಎಫ್ ಎಲ್ ಬಲ್ಬ್ ವಿತರಿಸುವ ಕೇಂದ್ರದ ಯೋಜನೆಗೆ ಪೂರಕವಾಗಿ ಈ ಯೋಜನೆ ಕಾರ್ಯ ನಿರ್ವಹಿಸಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಮುಖ್ಯಮಂತ್ರಿಯವರ ಅನುದಾನ ಯೋಜನೆಯ ಎರಡನೇ ಹಂತದ ಕಾಮಗಾರಿಗಳಿಗೆ ಪ್ರತಿ ಪಾಲಿಕೆಗೆ ರೂ. 100 ಕೋಟಿ ಅನುದಾನಕ್ಕೆ 800 ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ನಿರ್ವಹಣೆಗೆ 2 ಕೋಟಿ ರೂ.ಗಳ ಯೋಜನೆ ರೂಪಿಸಲಾಗುವುದು ಎಂದರು.
ಹುಬ್ಬಳ್ಳಿ-ಧಾರವಾಡ,
ಮಂಗಳೂರು
ಹಾಗೂ
ಮೈಸೂರು
ಮಹಾನಗರ
ಪಾಲಿಕೆಗಳ
ವ್ಯಾಪ್ತಿಯಲ್ಲಿ
ವಾಣಿಜ್ಯ
ಸಂಕೀರ್ಣ
ಹಾಗೂ
ಬಹುಮಹಡಿ
ವಾಹನ
ನಿಲುಗಡೆ
ತಾಣ
ನಿರ್ಮಾಣ
ಹಾಗೂ
ಚರಂಡಿ
ಶುದ್ಧೀಕರಣಕ್ಕೆ
ಪೌರ
ಕಾರ್ಮಿಕರನ್ನು
ಬಳಸುವ
ಬದಲಿಗೆ
ಯಂತ್ರ
ಬಳಸಲು
ನಿರ್ಧರಿಸಲಾಗಿದೆ
ಎಂದು
ಸಚಿವರು
ತಿಳಿಸಿದರು.
ಕಿರು
ಅರಣ್ಯ
ಅಭಿವೃದ್ಧಿ
:
ಮಹಾನಗರ
ಪಾಲಿಕೆ
ವ್ಯಾಪ್ತಿಗಳಲ್ಲಿನ
ಉದ್ಯಾನವನಗಳ
ನಿರ್ಮಾಣ
ಮತ್ತು
ನಿರ್ವಹಣೆಯನ್ನು
ಸಾರ್ವಜನಿಕರ
ಅನುಕೂಲಕ್ಕಿಂತ
ಗುತ್ತಿಗೆದಾರರಿಗೆ
ವರದಾನವಾಗಿ
ಪರಿಣಮಿಸಿದೆ.
ಇದನ್ನು
ತಪ್ಪಿಸಲು
ಐದು
ಎಕರೆಗಿಂತ
ಹೆಚ್ಚು
ವಿಸ್ತೀರ್ಣವುಳ್ಳ
ಉದ್ಯಾನವನಗಳನ್ನು
ಕಿರು
ಅರಣ್ಯಗಳನ್ನಾಗಿ
ರೂಪಾಂತರಿಸಲು
ಪಾಲಿಕೆ
ಆಡಳಿತಕ್ಕೆ
ಸಲಹೆ
ನೀಡಲಾಗಿದೆ
ಎಂದರು.
ಆಸ್ತಿತೆರಿಗೆ
ಸಂಗ್ರಹಣೆ:
ಕಳೆದ
ವರ್ಷಕ್ಕೆ
ಹೋಲಿಸಿದರೆ
ಆಸ್ತೆ
ತೆರಿಗೆ
ಸಂಗ್ರಹಣೆಯಲ್ಲಿ
ಮಹಾನಗರ
ಪಾಲಿಕೆಗಳು
ಉತ್ತಮ
ಪ್ರಗತಿ
ಸಾಧಿಸಿವೆ.
ಕಳೆದ
ವರ್ಷ
ಈ
ಅವಧಿಯಲ್ಲಿ
ಶೇ.42ರಿಂದ
50
ರಷ್ಟು
ಆಸ್ತಿತೆರಿಗೆ
ಸಂಗ್ರಹವಾಗಿದ್ದರೆ,
ಪ್ರಸಕ್ತ
ವರ್ಷ
ಆ
ಪ್ರಮಾಣ
ಶೇ.82
ರಿಂದ
85ಕ್ಕೆ
ಹೆಚ್ಚಳವಾಗಿದೆ
ಎಂದು
ಸುರೇಶ್ಕುಮಾರ್
ಹರ್ಷ
ವ್ಯಕ್ತಪಡಿಸಿದರು.
ಡಾರ್ಮೆಂಟರಿಗಳ
ನಿರ್ಮಾಣ
:
ಪ್ರಯಾಣಿಕರು
ಹಾಗೂ
ಇತರೆ
ಜನ
ಬಸ್
ನಿಲ್ದಾಣ,
ಉದ್ಯಾನವನಗಳಲ್ಲಿ
ಮಲಗುವುದನ್ನು
ತಪ್ಪಿಸಲು
ಪಾಲಿಕೆಗಳಿಗೆ
ಶೌಚಾಲಯ
ಮತ್ತು
ಕುಡಿಯುವ
ನೀರಿನ
ವ್ಯವಸ್ಥೆಯುಳ್ಳ
ಡಾರ್ಮೆಟರಿ
ನಿರ್ಮಿಸಲು
ಸೂಚಿಸಲಾಗಿದೆ.
ಈ
ಕಾರ್ಯಕ್ಕೆ
ಈಗಾಗಲೇ
ಮಂಗಳೂರು,
ಮೈಸೂರು,
ಹುಬ್ಬಳ್ಳಿ-ಧಾರವಾಡ
ಹಾಗೂ
ಬೆಳಗಾವಿ
ಮಹಾನಗರ
ಪಾಲಿಕೆ
ವ್ಯಾಪ್ತಿಗಳಲ್ಲಿ
ಸಮೀಕ್ಷೆ
ನಡೆಸಲಾಗಿದೆ.
ಮೊದಲ
ಹಂತದಲ್ಲಿಸುಮಾರು
7,250
ಮಂದಿ
ನಿರಾಶ್ರಿತರುಗಳನ್ನು
ಗುರುತಿಸಲಾಗಿದೆ
ಎಂದು
ಸಚಿವ
ಸುರೇಶ್ಕುಮಾರ್
ಸ್ಪಷ್ಟಡಿಸಿದರು.