ಬಿಬಿಎಂಪಿಗೂ ಅಂಟಿದ ಬಿಜೆಪಿ ಭಿನ್ನಮತ ವ್ಯಾಧಿ?
ರಾಜೀನಾಮೆ ನೀಡಿದವರಲ್ಲಿ ಮಾರುಕಟ್ಟೆ ಸ್ಥಾಯಿ ಸಮಿತಿ ಸದಸ್ಯ ಹಾಗೂ ಕೆಂಪೇಗೌಡ ವಾರ್ಡ್ ಕಾರ್ಪೊರೇಟರ್ ವೈ ಕೆ ಅಶ್ವಥ್, ತೋಟಗಾರಿಕೆ ಸ್ಥಾಯಿ ಸಮಿತಿ ಸದಸ್ಯ, ಚೌಡೇಶ್ವರಿ ವಾರ್ಡ್ ಸದಸ್ಯೆ ಕೆ ಯಶೋಧ, ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯ ಹಾಗೂ ಅಟ್ಟೂರು ವಾರ್ಡ್ ಸದಸ್ಯೆ ಗೀತ ಶಶಿಕುಮಾರ್, ಅಪೀಲುಗಳ ಸ್ಥಾಯಿ ಸಮಿತಿ ಸದಸ್ಯ ಯಲಹಂಕ ಉಪನಗರ ವಾರ್ಡ್ ಸದಸ್ಯ ಎಂ ಮುನಿರಾಜು ಪ್ರಮುಖರಾಗಿದ್ದಾರೆ.
ಬಿಬಿಎಂಪಿ ಸ್ಥಾಯಿ ಸಮಿತಿ ಸದಸ್ಯತ್ವಕ್ಕೆ ನಾಲ್ವರು ರಾಜೀನಾಮೆ ನೀಡಿದ್ದಾರೆನ್ನುವ ಮಾತು ಸತ್ಯಕ್ಕೆ ದೂರವಾದದ್ದು. ಪಕ್ಷದ ಸದಸ್ಯರಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲಾ ಸದಸ್ಯರು ಪಕ್ಷದ ನೀತಿ ನಿಯಮಗಳಿಗೆ ಬದ್ಧರಾಗಿದ್ದಾರೆ. ಯಾವುದೇ ಸದಸ್ಯರ ರಾಜೀನಾಮೆ ಪತ್ರ ನನಗಾಗಲಿ ಅಥವಾ ಪಕ್ಷದ ನಾಯಕರಿಗಾಗಲಿ ತಲುಪಿಲ್ಲ ಎಂದು ಮೇಯರ್ ಎಸ ಕೆ ನಟರಾಜ್ ಸ್ಪಷ್ಟೀಕರಣ ನೀಡಿದ್ದಾರೆ.
ಯಲಹಂಕ ವ್ಯಾಪ್ತಿಯ ಕಾರ್ಪೋರೇಟರ್ ಗಳು ಯಾರೂ ಸ್ಥಾಯಿ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನಾಡಿಲ್ಲ. ಇದು ನಮ್ಮ ಗಮನಕ್ಕೂ ಬಂದಿಲ್ಲ.ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಕೂಡಾ ಹೇಳಿದ್ದಾರೆ.