ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಲ್ಮಾಡಿಗೂ ಗೇಟ್ ಪಾಸ್ ನೀಡಿದ ಕಾಂಗ್ರೆಸ್
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕೋಟ್ಯಂತರ ರುಪಾಯಿ ಹಗರಣದ ಆರೋಪ ಎದುರಿಸುತ್ತಿರುವ ಕಲ್ಮಾಡಿ ಅವರ ತಲೆದಂಡಕ್ಕೆ ಬಿಜೆಪಿ ಪಟ್ಟು ಹಿಡಿದಿತ್ತು. ಇದರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಚವ್ಹಾಣ್ ಮತ್ತು ಕಲ್ಮಾಡಿ ಅವರನ್ನು ವಜಾಗೊಳಿಸಿ ಪ್ರತಿಪಕ್ಷಗಳನ್ನು ತಣ್ಣಗಾಗಿಸಲು ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಂಡಿದೆ.
ಈ ಇಬ್ಬರನ್ನು ವಜಾಗೊಳಿಸುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರವನ್ನು ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ. 2ಜಿಹಗರಣದಲ್ಲಿ ಭಾಗಿಯಾಗಿರುವ ದೂರಸಂಪರ್ಕ ಖಾತೆ ಸಚಿವ 'ಸ್ಪೆಕ್ಟ್ರಂ' ರಾಜ ತಲೆದಂಡಕ್ಕೆ ಈಗ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.
Comments
ಸುರೇಶ್ ಕಲ್ಮಾಡಿ ಕಾಮನ್ ವೆಲ್ತ್ ಕ್ರೀಡಾಕೂಟ ಬರಾಕ್ ಒಬಾಮಾ ಭಾರತ ಪ್ರವಾಸ ಕಾಂಗ್ರೆಸ್ suresh kalmadi commonwealth games barack obama congress winter session
Story first published: Tuesday, November 9, 2010, 15:57 [IST]