ಬಕ್ರೀದ್ ಬಕ್ರಾಗಳನ್ನು ಆರೆಸ್ಸೆಸ್ ನಿಂದ ರಕ್ಷಿಸಿ
ಕಳೆದ ಕೆಲವು ವರ್ಷಗಳಿಂದ ಈ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪ್ರಾಣಿಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ತು, ಆರೆಸ್ಸೆಸ್ ಮತ್ತಿತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಡ್ಡಿಯುಂಟು ಮಾಡುತ್ತ ಬಂದಿದ್ದಾರೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ನೀಡಿದ ಮನವಿಯಲ್ಲಿ ಜಮಾತ್ನ ಸಂಚಾಲಕ ಬಿ ಎಂ ಯೂಸುಫ್ ಖುರೇಷಿ ಹೇಳಿದ್ದಾರೆ.
'ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿಯ ಸೂಕ್ಷ್ಮ ಪ್ರದೇಶಗಳಲ್ಲಿ ಹೊಂಚು ಹಾಕುತ್ತ, ನಮ್ಮ ಪ್ರಾಣಿಗಳನ್ನು ಕಸಿದುಕೊಳ್ಳುತ್ತಾರೆ. ಸಿಬ್ಬಂದಿಗಳಿಗೆ ಹೊಡೆಯುತ್ತಾರೆ. ಈ ಸಂದರ್ಭದಲ್ಲಿ ಅವರು ನಮ್ಮ ಬಳಿ ಇರುವ ಅಧಿಕೃತ ಪರವಾನಿಗೆಯನ್ನೂ ಲೆಕ್ಕಿಸುವುದಿಲ್ಲ' ಎಂದು ಖುರೇಷಿ ದೂರಿದ್ದಾರೆ.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಕನಿಷ್ಠ ನಾಲ್ಕು ದಿನ ಜಾನುವಾರುಗಳನ್ನು ಕಡಿಯಲಾಗುತ್ತದೆ. ಈ ಕಾರಣದಿಂದಲೇ ಸಮುದಾಯದ ಸದಸ್ಯರು ರಾಜ್ಯದೆಲ್ಲೆಡೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದು, ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಖುರೇಷಿ ಅವರು ಆಗ್ರಹಿಸಿದ್ದಾರೆ.