ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಕ್ಷೇತರ ಶಾಸಕರ ವಿಚಾರಣೆ ನ.8ಕ್ಕೆ ಮುಂದೂಡಿಕೆ
ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸ್ಪೀಕರ್ ಕೆಜಿ ಬೋಪಯ್ಯ ಸೇರಿದಂತೆ ಪಕ್ಷೇತರ ಶಾಸಕರು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ ಮತದಾರರಾದ ಕೊಪ್ಪಳದ ಯಮನಪ್ಪ, ಹಿರಿಯೂರಿನ ಎಸ್ ಎಂ ಬಸವರಾಜ್, ಮಳವಳ್ಳಿಯ ಕೆ ಎಲ್ ಲಿಂಗೇಗೌಡ, ಪಾವಗಡದ ಕೃಷ್ಣಾನಾಯಕ್ ಹಾಗೂ ಹೊಸದುರ್ಗದ ಟಿಟಿ ನಾಗರಾಜ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ನವೆಂಬರ್ 4ರೊಳಗೆ ಈ ಸಂಬಂಧ ಉತ್ತರಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಸರಕಾರದ ಪರವಾಗಿ ಸತ್ಯಪಾಲ್ ಸಿಂಗ್ ಮತ್ತು ಸೊಲೀ ಸೂರಾಬ್ಜಿ ವಾದ ಮಂಡಿಸಿದರೆ, ಪಕ್ಷೇತರ ಶಾಸಕರಾದ ಗೂಳಿಹಟ್ಟಿ ಶೇಖರ್, ಡಿ ಸುಧಾಕರ್, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ ಮತ್ತು ಎಂಪಿ ನರೇಂದ್ರಸ್ವಾಮಿ ಪರವಾಗಿ ರವಿವರ್ಮಕುಮಾರ್ ವಾದ ಮಂಡಿಸುತ್ತಿದ್ದಾರೆ. ಎರಡು ಅರ್ಜಿಗಳ ವಿಚಾರಣೆಗಾಗಿ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣಪೀಠವನ್ನು ರಚಿಸಲಾಗಿದೆ. ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್, ನ್ಯಾ. ಎಎಸ್ ಬೋಪಣ್ಣ ಮತ್ತು ನ್ಯಾ. ಎಸ್ ಅಬ್ಧುಲ್ ನಜೀರ್ ಅವರಗಳು ಪೀಠದಲ್ಲಿದ್ದಾರೆ.
Comments
ಕರ್ನಾಟಕ ಹೈಕೋರ್ಟ್ ಪಕ್ಷೇತರ ಶಾಸಕರು ವಿಚಾರಣೆ ಯಡಿಯೂರಪ್ಪ ಕೆಜಿ ಬೋಪಯ್ಯ karnataka high court hearing petition yediyurappa kg bopaiah
Story first published: Tuesday, November 2, 2010, 12:51 [IST]