ಎಂಇಎಸ್ ಕರಾಳ ದಿನ ಆಚರಣೆ ರದ್ದು : ಯಡಿಯೂರಪ್ಪ
ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಮಧ್ಯಾಹ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು, ಕನ್ನಡಿಗರ ಅಶಯದ ವಿರುದ್ಧವಾಗಿ ಸರಕಾರ ಎಂದಿಗೂ ನಡೆದುಕೊಳ್ಳುವುದಿಲ್ಲ ಎಂದರು. ನವೆಂಬರ್ 1 ರಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು. ಇದನ್ನು ವಿರೋಧಿಸಿ ಎಂಇಎಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಕರಾಳ ದಿನ ಅಚರಿಸಲು ಮುಂದಾಗಿರುವುದು ಸರಿಯಲ್ಲ. ಬೆಳಗಾವಿ ಜಿಲ್ಲಾಡಳಿತ ಕರಾಳ ದಿನ ಆಚರಿಸಲು ಅನುಮತಿ ನೀಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಅನುಮತಿ ರದ್ದುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ದೊಡ್ಡಬಳ್ಳಾಪುರ
ಜಿಲ್ಲೆ
:
ರಾಜ್ಯೋತ್ಸವ
ಆಚರಣೆ
ಸಂಭ್ರಮದಲ್ಲಿರುವ
ದೊಡ್ಡಬಳ್ಳಾಪುರ
ಜನಕ್ಕೆ
ಮುಖ್ಯಮಂತ್ರಿ
ಯಡಿಯೂರಪ್ಪ
ಬಹುದೊಡ್ಡ
ಬಹುಮಾನ
ನೀಡಿದ್ದಾರೆ.
ದೊಡ್ಡಬಳ್ಳಾಪುರವನ್ನು
ಸದ್ಯದಲ್ಲೇ
ಜಿಲ್ಲೆಯಾಗಿ
ಪರಿವರ್ತಿಸಲಾಗುವುದು
ಎಂದು
ಅವರು
ಘೋಷಣೆ
ಮಾಡಿದ್ದಾರೆ.
(ಈ
ಬಗ್ಗೆ
ಹೆಚ್ಚಿನ
ಮಾಹಿತಿ
ನಿರೀಕ್ಷಿಸಲಾಗಿದೆ)
20
ವರ್ಷ
ನಾನೇ
ಸಿಎಂ
:
ಜನಾದೇಶದ
ಸರಕಾರವನ್ನು
ಪತನಗೊಳಿಸುವ
ಯತ್ನಿಸಿದ
ಪ್ರತಿಪಕ್ಷಗಳ
ವಿರುದ್ಧ
ಸಿಎಂ
ಯಡಿಯೂರಪ್ಪ
ತೀವ್ರ
ವಾಗ್ದಾಳಿ
ನಡೆಸಿದರು.
ಮುಂದಿನ
20
ವರ್ಷ
ಕರ್ನಾಟಕದಲ್ಲಿ
ಬಿಜೆಪಿ
ಅಧಿಕಾರದಲ್ಲಿರುತ್ತದೆ.
ನಾನೇ
ಮುಖ್ಯಮಂತ್ರಿಯಾಗಿ
ಮುಂದುವರೆಯುತ್ತೇನೆ.
ನನ್ನನ್ನು
ಕೆಳಗಿಳಿಸಲು
ಯಾರಿಂದಲೂ
ಸಾಧ್ಯವಿಲ್ಲ
ಎಂದು
ವಿಪಕ್ಷಗಳಿಗೆ
ತಿರುಗೇಟು
ನೀಡಿದರು.
ಎಂಇಎಸ್ ನಿಷೇಧಿಸಿ : ನವೆಂಬರ್ 1 ರಂದು ಕನ್ನಡಿಗರು ರಾಜ್ಯೋತ್ಸವ ಆಚರಿಸುವ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಂದು ಕರಾಳ ದಿನ ಆಚರಿಸಲು ನಿರ್ಧರಿಸಿದ್ದಲ್ಲದೇ, ಈ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಿರುವುದು ಖಂಡನೀಯ. ಸರಕಾರ ಬೇಗ ಎಚ್ಚತ್ತುಕೊಂಡು ಎಂಇಎಸ್ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಈ ಕೂಡಲೇ ಕರ್ನಾಟಕದಲ್ಲಿ ಎಂಇಎಸ್ ಮೇಲೆ ನಿಷೇಧ ಹೇರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ ಒತ್ತಾಯಿಸಿದ್ದಾರೆ.