ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಯೋಧ್ಯೆ : ನ.10ರೊಳಗೆ ಹಿಂದೂಸಭಾದಿಂದ ಮೇಲ್ಮನವಿ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹಿಂದೂ ಮಹಾಸಭೆಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಕಮಲೇಶ್ ತಿವಾರಿ, ಹೈಕೋರ್ಟ್ ತೀರ್ಪಿನ ವಿರುದ್ಧ ಮಹಾಸಭಾ ನವೆಂಬರ್ 10ರೊಳಗೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿದೆ ಹಾಗೂ ಮೊಕದ್ದಮೆಯನ್ನು ಮುನ್ನಡೆಸುವ ಅಧಿಕಾರವನ್ನು ಸಂಘಟನೆಯ ರಾಷ್ಟ್ರೀಯ ನಾಯಕ ದಿನೇಶ್ ಚಂದ್ರ ತ್ಯಾಗಿಗೆ ನೀಡಲಾಗಿದೆ ಎಂದು ತಿಳಿಸಿದರು.
ಅಲಹಾಬಾದ್ ಹೈಕೋರ್ಟ್ನಲ್ಲೂ ಅಯೋಧ್ಯೆ ಭೂವಿವಾದ ಮೊಕದ್ದಮೆಯನ್ನು ಸಂಘಟನೆಯ ಪರವಾಗಿ ತ್ಯಾಗಿಯೇ ವಾದಿಸಿದ್ದರಿಂದ, ಸುಪ್ರೀಂಕೋರ್ಟ್ ನಲ್ಲಿಯೂ ಅವರೇ ಅದನ್ನು ಮುನ್ನಡೆಸಬೇಕೆಂದು ಇತ್ತೀಚೆಗೆ ನಡೆದ ಮಹಾಸಭೆಯ ಸರ್ವ ಬಣಗಳ ಸಭೆಯಲ್ಲಿ ನಿರ್ಧರಿಸಲಾಯಿತೆಂದು ತಿವಾರಿ ತಿಳಿಸಿದ್ದಾರೆ.
Comments
ಅಯೋಧ್ಯೆ ರಾಮಜನ್ಮಭೂಮಿ ಬಾಬ್ರಿ ಮಸೀದಿ ಹಿಂದೂ ಮಹಾಸಭಾ ಮುಸ್ಲಿಂ ಆರೆಸ್ಸೆಸ್ ayodhya ram janmabhoomi babri masjid hindu mahasabha muslim rss
Story first published: Sunday, October 31, 2010, 17:54 [IST]