'ಕೈ' ಎತ್ತಿದ ಮಾಲೀಕಯ್ಯ, ರೇಣುಕಗೆ ಕೊಕ್?
ಅಪರೇಷನ್ ಕಮಲಕ್ಕೆ ಬಲಿಯಾಗುವವರ ಲಿಸ್ಟ್ ನಲ್ಲಿ ಮಾಲೀಕಯ್ಯ ಅವರ ಹೆಸರು ಮುಂಚೂಣಿಯಲ್ಲಿದ್ದು, ತಮಗೆ ಅಬಕಾರಿ ಖಾತೆಯನ್ನೇ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಮೊದಲಿನಿಂದಲೂ ನಮ್ಮ ಕುಟುಂಬ ಅಬಕಾರಿ ವ್ಯವಹಾರವನ್ನು ಮಾಡಿಕೊಂಡು ಬಂದಿದೆ. ಹೀಗಾಗಿ ಅಬಕಾರಿ ಖಾತೆಯನ್ನೇ ಕೊಟ್ಟರೆ ಸೈ ಎಂದು ಗುತ್ತೇದಾರ್ ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.
ಮೂಲಗಳ ಪ್ರಕಾರ ಫ್ಯಾಕ್ಸ್ ಮೂಲಕ ಮಾಲೀಕಯ್ಯ ಗುತ್ತೇದಾರ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾದರೆ ಖುದ್ದು ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ನೀಡಬೇಕಾಗಿದ್ದರಿಂದ ಮಾಲೀಕಯ್ಯ ಅವರ ರಾಜೀನಾಮೆ ಪತ್ರವನ್ನು ಸ್ಪೀಕರ್ ಅಂಗೀಕರಿಸಿಲ್ಲ ಎಂದು ಹೇಳಲಾಗಿದೆ. ಮಾಲೀಕಯ್ಯ ಅವರ ಖಾತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತೀರ್ಮಾನ ಸ್ಪಷ್ಟಗೊಂಡಿಲ್ಲ.
ರೇಣುಕಗೆ ಕೊಕ್ : ಬಿಜೆಪಿಯ ಬಂಡಾಯದ ಬಿಕ್ಕಟ್ಟಿನ ಸೂತ್ರದಾರ ಅಬಕಾರಿ ಮಂತ್ರಿ ಎಂಪಿ ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಬಿಜೆಪಿಯ ಅನೇಕ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರ ಮೇಲೆ ಭಾರಿ ಒತ್ತಡ ಹೇರುತ್ತಿದ್ದಾರೆ. ವಿಶೇಷವಾಗಿ ಬೆಂಗಳೂರು ಭಾಗದ ಶಾಸಕರು ರೇಣುಕಾಚಾರ್ಯ ಅವರನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.
ರೇಣುಕಾಚಾರ್ಯ
ಅವರನ್ನು
ಸಂಪುಟದಿಂದ
ಕೈಬಿಡುವುದಕ್ಕಿಂತ
ಕೆಲಸಕ್ಕೆ
ಬಾರದ
ಖಾತೆ
ಕೊಟ್ಟು
ಮೂಲೆಗುಂಪು
ಮಾಡುವುದು
ಮುಖ್ಯಮಂತ್ರಿ
ಪ್ಲಾನ್.
ಗೂಳಿಹಟ್ಟಿ
ಶೇಖರ್
ಹೊಂದಿದ್ದ
ಯುವಜನ
ಮತ್ತು
ಕ್ರೀಡಾ
ಖಾತೆಯನ್ನು
ನೀಡಬೇಕು
ಎನ್ನುವುದು
ಯಡಿಯೂರಪ್ಪ
ಅವರ
ಅಭಿಮತ.