ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

By Mahesh
|
Google Oneindia Kannada News

IAS Officier Shika
ಬೆಂಗಳೂರು, ಅ.21: ಅಧಿಕಾರಿಗಳ ವರ್ಗಾವಣೆ ಪರ್ವ ಮತ್ತೆ ಆರಂಭಿಸಿರುವ ರಾಜ್ಯ ಬಿಜೆಪಿ ಸರ್ಕಾರ, ಗಣಿಧಣಿಗಳ ಪಾಳೆಯಕ್ಕೆ ಸೇರಿದ ಬಳ್ಳಾರಿ, ಗದಗಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ 10 ಜನ ಐಎಎಸ್ ಅಧಿಕಾರಿಗಳಿಗೆ ರಾಜ್ಯಸರ್ಕಾರ ಬುಧವಾರ ವರ್ಗಾವಣೆ ಆದೇಶ ನೀಡಿದೆ. ಬಳ್ಳಾರಿ ಜಿಲ್ಲಾಧಿಕಾರಿ ಬಿ. ಶಿವಪ್ಪ ಅವರ ಜಾಗಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿದ್ದ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಶಿವಪ್ಪ ಅವರಿಗೆ ಇನ್ನೂ ಯಾವುದೇ ಜಿಲ್ಲೆವಹಿಸಿಕೊಟ್ಟಿಲ್ಲ.

ಉಳಿದಂತೆ ಗದಗಕ್ಕೆ ಎಸ್.ಶಂಕರನಾರಾಯಣ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರನ್ನು ವರ್ಗ ಮಾಡಲಾಗಿದೆ. ಬಿ. ಶಿವಪ್ಪ ಅವರಂತೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಡಿಸಿ ಪಂಕಜ್ ಕುಮಾರ್ ಪಾಂಡೆ, ದ.ಕ. ಜಿಲ್ಲೆ ಡಿಸಿ ಸುಭೋದ್ ಯಾದವ್, ರಾಮನಗರ ಡಿಸಿ ಜಿ.ಎಲ್. ಚಂದ್ರಶೇಖರಯ್ಯ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.

ಅಧಿಕಾರಿಗಳ ವರ್ಗಾವಣೆ ವಿವರ:

* ಕೆ.ಅಮರನಾರಾಯಣ- ಚಾಮರಾಜನಗರ.
* ಸುಬೋಧ್ ಯಾದವ್- ದಕ್ಷಿಣ ಕನ್ನಡ.
* ವಿ.ಪೊನ್ನುರಾಜ್- ಶಿವಮೊಗ್ಗ.
* ಎಸ್.ಶಂಕರನಾರಾಯಣ- ಗದಗ.
* ಡಾ.ಎಂ.ಎನ್.ಅಜಯ್ ನಾಗಭೂಷಣ್- ರಾಮನಗರ.
* ಡಾ.ಎನ್.ವಿ.ಪ್ರಸಾದ್- ಚಿತ್ರದುರ್ಗ.
* ಶ್ರೀಮತಿ ಸಿ.ಶಿಖಾ- ಕೋಲಾರ.
* ಬಿ.ಎನ್.ಕೃಷ್ಣಯ್ಯ-ಉತ್ತರ ಕನ್ನ ಜಿಲ್ಲೆ
* ಆಮ್ಲನ್ ಆದಿತ್ಯ ಬಿಸ್ವಾಸ್-ಬಳ್ಳಾರಿ ಜಿಲ್ಲೆ
* ಚಕ್ರವರ್ತಿ ಮೋಹನ್- ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಹಾಗೂ ವಿಶೇಷ ಅಧಿಕಾರಿ, ಸಿಇಟಿ ಘಟಕ, ಬೆಂಗಳೂರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X