ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಮ್ಮ ತೀರ್ಪನ್ನು ಸಮರ್ಥಿಕೊಂಡ ಬೋಪಯ್ಯ
ಸದನದಲ್ಲಿ ಸಿಕ್ಕಾಪಟ್ಟೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಶಾಂತರಾಗಿ ತಮ್ಮ ತಮ್ಮ ಆಸನಕ್ಕೆ ಹೋಗಿ ಕುಳಿತುಕೊಳ್ಳಿ ಎಂದು ಪದೇ ಪದೆ ಶಾಸಕರನ್ನು ವಿನಂತಿಸಿಕೊಂಡೆ. ಆದರೆ, ಅಧ್ಯಕ್ಷಪೀಠದ ವಿನಂತಿಯನ್ನು ಕೇಳದ ಶಾಸಕರು ಕೂಗಾಟ, ಅರಚಾಟ ಮತ್ತು ದೊಂಬಿ ವಾತಾವರಣ ನಿರ್ಮಿಸಿದ್ದರಿಂದ ಧ್ವನಿ ಮತಕ್ಕೆ ಹಾಕಿದೆ. ಧ್ವನಿ ಮತ ಯಡಿಯೂರಪ್ಪ ಪರವಾಗಿ ಬಂತು ಎಂದರು.
ರಾಜ್ಯಪಾಲರ ಆದೇಶದ ಪ್ರಕಾರವೇ ತಾವು ಕಾರ್ಯ ನಿರ್ವಹಿಸಿದುದಾಗಿಯೂ ಬೋಪಯ್ಯ ಸಮರ್ಥಿಸಿಕೊಂಡರು. ವಿಶ್ವಾಸ ಮತ ನಿರ್ಣಯಕ್ಕೆ ರಾಜ್ಯಪಾಲರು ನಮಗೆ ನೀಡಿದ್ದು ಒಂದೇ ಒಂದಿ ದಿನ. ಅದರಂತೆ ನಾನು ಇವತ್ತೇ ಕಲಾಪಗಳನ್ನು ಮುಗಿಸಬೇಕಾಗಿತ್ತು. ಇಂದು ಬೆಳಗ್ಗೆ ಸದನದಲ್ಲಿ ತಲೆದೋರಿದ ವಾತಾವರಣವನ್ನು ಗಮನಿಸಿದರೆ ನಾನು ಕೊಟ್ಟ ತೀರ್ಪು ಅತ್ಯಂತ ಸಮಂಜಸವಾಗಿದೆ ಎಂದು ಬೋಪಯ್ಯ ಹೇಳಿದರು.
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS
Comments
ವಿಶ್ವಾಸಮತ ಕೆಜಿ ಬೋಪಯ್ಯ ಯಡಿಯೂರಪ್ಪ ರಾಜ್ಯಪಾಲ ಬಿಜೆಪಿ ಸಭಾಧ್ಯಕ್ಷ ವಿಧಾನಸಭೆ ಹಂಸರಾಜ್ ಭಾರದ್ವಾಜ್ ಮುಖ್ಯಮಂತ್ರಿ kg bopaiah yediyurappa trust vote hansraj bharadwaj speaker bjp
Story first published: Monday, October 11, 2010, 15:05 [IST]