ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಂತರಿಕ ಬಂಡಾಯ: ರೆಡ್ಡಿ ಸಹೋದರರ ಕೈವಾಡ?
ಸಂಪುಟ ಪುನಾರಚನೆ ಸಂದರ್ಭದಲ್ಲಿ ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಣಿಸುವ ಸಂಬಂಧ ಗಣಿ ರೆಡ್ಡಿಗಳು ಹೆಣೆದಿರುವ ತಂತ್ರ ಇದು ಎನ್ನಲಾಗಿದೆ. ಬುಧವಾರ ಜನಾರ್ದನರೆಡ್ಡಿ ಸಂಧಾನಕ್ಕೆ ತೆರಳಿದ ನಂತರ ಬಂಡಾಯ ಶಾಸಕರ ಬೇಡಿಕೆ ಬದಲಾಗಿರುವುದರ ಹಿಂದೆ ಈ ದಟ್ಟ ಅನುಮಾನ ವ್ಯಕ್ತವಾಗಿದೆ.
ಒಂದು ವೇಳೆ ಪ್ರಸಕ್ತ ಬಂಡಾಯ ಶಮನಗೊಂಡರೆ ಇದರಲ್ಲಿ ರೆಡ್ಡಿ ಸಹೋದರರ ಪಾತ್ರ ಇರುವುದು ಸ್ಪಷ್ಟವಾಗಲಿದೆ.ಏತನ್ಮಧ್ಯೆ ಬಂಡಾಯ ಶಾಸಕರು ಕೊಚ್ಚಿಯಿಂದ ಮುಂಬೈಗೆ ತೆರಳಿದ್ದು ಅಲ್ಲಿಂದ ಹಾಂಕಾಂಗೆ ಹಾರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತೆ ಗೋಚರವಾಗುತ್ತಿದೆ. ಯಾವಾಗ ಏನಾಗುತ್ತದೋ ಎಂಬುದು ಕಾಲ ನಿರ್ಣಯಿಸಲಿದೆ.
Comments
ಬಿಜೆಪಿ ಜನಾರ್ಧನ ರೆಡ್ಡಿ ಬಿಕ್ಕಟ್ಟು ಭಿನ್ನಮತ ಯಡಿಯೂರಪ್ಪ ಜೆಡಿಎಸ್ ಬಾಲಚಂದ್ರ ಜಾರಕಿಹೊಳಿ bjp janardhana reddy congress jds anand asnotikar balachandra jarkiholi
Story first published: Thursday, October 7, 2010, 11:19 [IST]