ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಯೋಧ್ಯೆ ತೀರ್ಪು ತೀರ್ಪೇ ಅಲ್ಲ : ಅರುಂಧತಿ ರಾಯ್
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್)ನ ಸಮಾವೇಶವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಬಾಬ್ರಿ ಮಸೀದಿಯೊಳಗೆ 1949ರಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾ ಪ್ರತಿಮೆಗೆ ಮಾನವನ ಸ್ಥಾನಮಾನ ನೀಡಿ, ವಿವಾದಿತ ಭೂಮಿಯಲ್ಲಿ ಪಾಲು ನೀಡಿರುವುದು ದಿಗ್ಭ್ರಮೆಯನ್ನು ಹುಟ್ಟು ಹಾಕಿದೆ. ಇದೊಂದು ತರ್ಕ ರಹಿತ ತೀರ್ಪಿನಂತಿದೆ ಎಂದು ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣ ದಾಖಲಿಸಲ್ಪಟ್ಟು 60 ವರ್ಷಗಳ ಬಳಿಕ ನ್ಯಾಯಾಲಯ ತೀರ್ಪು ನೀಡಿರುವ ಮೂಲ ಕಾರಣವನ್ನು ಪ್ರಶ್ನಿಸಿರುವ ರಾಯ್, ಚುನಾವಣೆಗೆ ಮೊದಲು ರಾಜಕೀಯ ಲಾಭಕ್ಕಾಗಿ ಸಂಭವಿಸುವ ಕೋಮು ಗಲಭೆಯ ಭಯ ತೀರ್ಪಿನಲ್ಲಿ ಕಂಡು ಬರುತ್ತದೆ ಎಂದು ಹೇಳಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ವಾದಕ್ಕೆ ಇದು ನಿಜಕ್ಕೂ ಬೆದರಿಕೆಯಾಗಿದೆ. ಹೀಗಾಗಿ ಈ ವಿಷಯದಲ್ಲಿ ನಾವು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ ಎಂದು ರಾಯ್ ತಿಳಿಸಿದ್ದಾರೆ.
Comments
ಅಯೋಧ್ಯೆ ಅರುಂಧತಿ ರಾಯ್ ಬಾಬ್ರಿ ಮಸೀದಿ ರಾಮಜನ್ಮಭೂಮಿ ಅಲಹಾಬಾದ್ ಹೈಕೋರ್ಟ್ ayodhya arundhati roy allahabad babri masjid ram janmabhoomi
Story first published: Monday, October 4, 2010, 15:23 [IST]