ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮಜನ್ಮಭೂಮಿ ಹಿಂದೂಗಳ ಸ್ವತ್ತು : ಚಿದಾನಂದಮೂರ್ತಿ
ಅಯೋಧ್ಯೆ ಹಿಂದುಗಳ ಪವಿತ್ರ ಕ್ಷೇತ್ರ. 10-11ನೇ ಶತಮಾನದ ಕನೋಜ್ ಚಕ್ರವರ್ತಿಗಳ ಕಾಲದಿಂದ ಅಲ್ಲಿ ಹಲವು ದೇವಾಲಯಗಳು ನಿರ್ಮಾಣವಾದವು. ಅದಕ್ಕೂ ಮೊದಲೇ ರಾಮದೇವಾಲಯವಿತ್ತು ಎಂದು ಅವರು ಹೇಳಿದರು. ಕ್ರಿ.ಶ. 1528ರಲ್ಲಿ ದೆಹಲಿಯ ಮೊಘಲ್ ಸಾಮ್ರಾಟ ಬಾಬರನು ಅದನ್ನು ಭಗ್ನಗೊಳಿಸಿ ಮಸೀದಿ ಕಟ್ಟಿಸಿದ.
ಆ ಮಸೀದಿಯು ರಾಮಜನ್ಮಭೂಮಿಯಲ್ಲಿ ನಿರ್ಮಾಣವಾದದ್ದು ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳಿವೆ. ಆದ್ದರಿಂದ ತೀರ್ಪು ಹಿಂದುಗಳ ಪರ ಆಗುವವರೆಗೂ ಹೋರಾಟ ಮಾಡೋಣ. ಆದರೆ, ಸಹನೆ ಕಳೆದುಕೊಂಡು ಹಿಂಸಾಚಾರಕ್ಕೆ ಕೈಹಾಕಬಾರದು ಎಂದರು. ಆತ್ಮಾನಂದ ಸರಸ್ವತಿ ಸ್ವಾಮೀಜಿ, ಅಯೋಧ್ಯೆಯಲ್ಲಿ ಈ ಹಿಂದೆ ನಡೆದ ಆಂದೋಲನ ಹಾಗೂ ಗಲಭೆ ಕುರಿತ ಕೆಲವು ಘಟನೆಗಳನ್ನು ವಿವರಿಸಿದರು. ಹಿಂದು ಮಹಾಸಭಾ ಅಧ್ಯಕ್ಷ ಎಂ.ವಾಸುದೇವರಾವ್ ಕಶ್ಯಪ್, ಅಯೋಧ್ಯೆ ಹಿಂದುಗಳ ಪರವಾಗುವವರೆಗೆ ಹೋರಾಡುವುದಾಗಿ ತಿಳಿಸಿದರು.
ಅಯೋಧ್ಯೆ ಬಾಬ್ರಿ ಮಸೀದಿ ಅಲಹಾಬಾದ್ ಹೈಕೋರ್ಟ್ ಸುಪ್ರಿಂಕೋರ್ಟ್ ಕೇಂದ್ರ ಉತ್ತರ ಪ್ರದೇಶ ayodhya m chidanandamurthy ram janmabhoomi babri masjid allahabad
Story first published: Wednesday, September 29, 2010, 17:59 [IST]