ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ಸಿಗರಿಗೆ ರೋಗ ಬಂದಿದೆ : ವಿಶ್ವನಾಥ
ಇದಕ್ಕಾಗಿ ದಿಲ್ಲಿಯ ವರಿಷ್ಠರ ಕಡೆ ನೋಡಬೇಕಿಲ್ಲ. ನಮ್ಮಲ್ಲೇ ವೈದ್ಯರಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾರ್ಮಿಕವಾಗಿ ನುಡಿದರು. ಪರಸ್ಪರ ಕಾಲೆಳೆಯುವುದು, ಹಣ ಮಾಡುವುದು ಸೇರಿದಂತೆ ಕಾಯಿಲೆಗೆ ಬಗೆಬಗೆಯ ಲಕ್ಷಣಗಳನ್ನು ಗುರುತಿಸಬಹುದು. ಸೋಲಿಗೆ ಕಾರಣ ಏನೆಂಬುದರ ಬಗ್ಗೆ ಎಲ್ಲ ವರಿಷ್ಠರು ಒಟ್ಟಿಗೆ ಕುಳಿತು ಚರ್ಚಿಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸ್ಥಳೀಯವಾಗಿ ಚಿಂತನೆ, ಚರ್ಚೆ ನಡೆಸಿದರೆ ಹೈಕಮಾಂಡ್ ಬೇಡ ಎನ್ನದು. ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಮೊದಲು ಈ ಕೆಲಸ ಮಾಡಲಿಎಂದು ಸಲಹೆ ನೀಡಿದರು.
ಮಂತ್ರಿ ಮಗನನ್ನು ಬಂಧಿಸಿ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪರಿಹಾರ ವಿತರಣೆ ಹಗರಣದಲ್ಲಿ ಹಿರಿಯ ಅಧಿಕಾರಿಗಳು ಮಾತ್ರವಲ್ಲದೆ, ಪ್ರಭಾವಿ ಮಂತ್ರಿಯೊಬ್ಬರ ಮಗನು ಶಾಮೀಲಾಗಿದ್ದಾನೆ. ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಮಂತ್ರಿ ಮಗನನ್ನು ಕೂಡಲೇ ಬಂಧಿಸಿ ಎಂದು ಆಗ್ರಹಿಸಿದರು.
Comments
Story first published: Sunday, September 26, 2010, 15:29 [IST]