ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈ ಮೇಲೆ ಮಲ ಸುರಿದುಕೊಂಡರೆ ಅಪರಾಧ

By Mahesh
|
Google Oneindia Kannada News

Minister Narayanaswamy
ಕೋಲಾರ, ಸೆ. 25: ದಲಿತರು ಸಾರ್ವಜನಿಕವಾಗಿ ಮೈಮೇಲೆ ಮಲ ಸುರಿದುಕೊಂಡು ಸಮಾಜ ಮತ್ತು ಸರಕಾರಕ್ಕೆ ಬೇಸರ ತರಿಸುವುದರ ಬದಲು ಇಡೀ ಸಮಾಜವೇ ಮೆಚ್ಚಬಹುದಾದ ರೀತಿಯಲ್ಲಿ ತಮ್ಮ ನ್ಯಾಯಯುತ ಪ್ರತಿಭಟನೆ, ಚಳವಳಿಗಳನ್ನು ಹಮ್ಮಿಕೊಳ್ಳುವುದನ್ನು ಕಲಿಯಲಿ ಎಂದು ಸಮಾಜ ಕಲ್ಯಾಣ ಇಲಾಖಾ ಸಚಿವ ಆನೇಕಲ್ ನಾರಾಯಣ ಸ್ವಾಮಿ ಕಿವಿಮಾತು ಹೇಳಿದ್ದಾರೆ.

ನಗರದ ವಿದ್ಯಾರ್ಥಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ ಹೊರಿಸುವುದು ಎಷ್ಟು ಅಪರಾಧವೋ, ಮಲ ಮೈಮೇಲೆ ಸುರಿದುಕೊಳ್ಳುವುದು ಕೂಡಾ ಅಷ್ಟೇ ಅಪರಾಧ.

ಈ ರೀತಿಯ ಕಾನೂನು ಬಾಹಿರ ಪ್ರತಿಭಟನೆಗಳನ್ನು ಮಾಡುವಾಗ ನೋಡುತ್ತಾ ಕೂರುವ ಅಧಿಕಾರಿಗಳ ಮೇಲೆ ಅಪರಾಧಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎನ್ನುವ ಕಾರಣಕ್ಕೆ ಅಟ್ರಾಸಿಟಿ ದಾವೆ ಹಾಗೂ ಮಲ ಸುರಿದುಕೊಳ್ಳುವವರ ವಿರುದ್ಧ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದ ಕಾರಣಕ್ಕಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಇಂತಹ ಸಂದರ್ಭಗಳಲ್ಲಿ ದಲಿತ ಸಂಘಟನೆಗಳ ಮುಖಂಡರುಗಳು ಸಮಯ ಪ್ರಜ್ಞೆಯಿಂದ ವರ್ತಿಸಬೇಕು, ಹೋರಾಟ, ಚಳವಳಿ ಮಾಡುವುದು ಸಹ ಜನಪರ ಹಾಗೂ ಜನ ಮೆಚ್ಚುವ ರೀತಿಯಲ್ಲಿರಬೇಕೇ ಹೊರತು ಜನರಿಗೆ ಅಸಹ್ಯವೆನಿಸುವ ರೀತಿಯಲ್ಲಿರಬಾರದು.

ಪ್ರತಿಭಟನೆ ನಡೆಸುವುದು ಸಮಾಜದ ನೈತಿಕ ಬೆಂಬಲ ಪಡೆಯುವ ರೀತಿಯಲ್ಲಿರಬೇಕು ಎಂದು ಸಲಹೆ ನೀಡಿದ ಸಚಿವರು, ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಮಾಹಿತಿ ಪಡೆಯಲಾಗಿದೆ ಎಂದರು.

ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತರುವುದಾಗಿ ಹೇಳಿದ ಅವರು, ಮುಂದಿನ ದಿನಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X