ಮೈ ಮೇಲೆ ಮಲ ಸುರಿದುಕೊಂಡರೆ ಅಪರಾಧ
ನಗರದ ವಿದ್ಯಾರ್ಥಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ ಹೊರಿಸುವುದು ಎಷ್ಟು ಅಪರಾಧವೋ, ಮಲ ಮೈಮೇಲೆ ಸುರಿದುಕೊಳ್ಳುವುದು ಕೂಡಾ ಅಷ್ಟೇ ಅಪರಾಧ.
ಈ ರೀತಿಯ ಕಾನೂನು ಬಾಹಿರ ಪ್ರತಿಭಟನೆಗಳನ್ನು ಮಾಡುವಾಗ ನೋಡುತ್ತಾ ಕೂರುವ ಅಧಿಕಾರಿಗಳ ಮೇಲೆ ಅಪರಾಧಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎನ್ನುವ ಕಾರಣಕ್ಕೆ ಅಟ್ರಾಸಿಟಿ ದಾವೆ ಹಾಗೂ ಮಲ ಸುರಿದುಕೊಳ್ಳುವವರ ವಿರುದ್ಧ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದ ಕಾರಣಕ್ಕಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಇಂತಹ ಸಂದರ್ಭಗಳಲ್ಲಿ ದಲಿತ ಸಂಘಟನೆಗಳ ಮುಖಂಡರುಗಳು ಸಮಯ ಪ್ರಜ್ಞೆಯಿಂದ ವರ್ತಿಸಬೇಕು, ಹೋರಾಟ, ಚಳವಳಿ ಮಾಡುವುದು ಸಹ ಜನಪರ ಹಾಗೂ ಜನ ಮೆಚ್ಚುವ ರೀತಿಯಲ್ಲಿರಬೇಕೇ ಹೊರತು ಜನರಿಗೆ ಅಸಹ್ಯವೆನಿಸುವ ರೀತಿಯಲ್ಲಿರಬಾರದು.
ಪ್ರತಿಭಟನೆ ನಡೆಸುವುದು ಸಮಾಜದ ನೈತಿಕ ಬೆಂಬಲ ಪಡೆಯುವ ರೀತಿಯಲ್ಲಿರಬೇಕು ಎಂದು ಸಲಹೆ ನೀಡಿದ ಸಚಿವರು, ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಮಾಹಿತಿ ಪಡೆಯಲಾಗಿದೆ ಎಂದರು.
ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತರುವುದಾಗಿ ಹೇಳಿದ ಅವರು, ಮುಂದಿನ ದಿನಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.