ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೆ. 29 ರಂದು ತೀರ್ಪು ನೀಡಲು ಅಡ್ವಾಣಿ ಮನವಿ
ಇಲ್ಲಿನ ಪ್ರಸಿದ್ಧ ಶಿವಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅಡ್ವಾಣಿ, ಸುಪ್ರೀಂಕೋರ್ಟ್ನ ನಿರ್ಧಾರವನ್ನು ಅರ್ಥೈಸಿಕೊಳ್ಳಲು ಕಷ್ಟವಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುತ್ತೇನೆ. ಆದರೆ, ಜನರೆಲ್ಲ ಅಯೋಧ್ಯೆಯ ಕುರಿತಾದ ತೀರ್ಪನ್ನು ಕಾಯುತ್ತಿರುವಾಗ, ಪ್ರಕರಣದ ಕಕ್ಷಿಗಳೂ ತೀರ್ಪನ್ನು ಬಯಸುತ್ತಿರುವಾಗ ಹಾಗೂ ಅಲಹಾಬಾದ್ ಹೈಕೋರ್ಟ್ ತೀರ್ಪು ಮುಂದೂಡಿಕೆಯ ಮನವಿಯನ್ನು ತಿರಸ್ಕರಿಸಿದ್ದಾಗ ಸುಪ್ರೀಂ ಕೋರ್ಟ್ನ ಈ ನಿರ್ಧಾರ ಹೊರಬಿದ್ದಿದೆ ಎಂದು ಹೇಳಿದರು.
ಜನರು ಕಳೆದ 50 ವರ್ಷಗಳಿಂದ ತೀರ್ಪಿಗಾಗಿ ಕಾಯುತ್ತಿದ್ದಾರೆ. ಆದ್ದರಿಂದ, ಸೆ.28ರಂದು ಅರ್ಜಿಯ ಅಂತಿಮ ವಿಚಾರಣೆ ನಡೆಸಿ ಸೆ.29ರಂದು ಅಲಹಾಬಾದ್ ಹೈಕೋರ್ಟ್ಗೆ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡುವುದಾಗಿ ಅವರು ಹೇಳಿದರು.
Comments
ಎಲ್ ಕೆ ಅಡ್ವಾಣಿ ಅಯೋಧ್ಯೆ ರಾಮಜನ್ಮಭೂಮಿ ಬಾಬ್ರಿ ಮಸೀದಿ ಅಲಹಾಬಾದ್ ಹೈಕೋರ್ಟ್ ಸುಪ್ರಿಂಕೋರ್ಟ್ lk advani ayodhya babri masjid supreme court
Story first published: Sunday, September 26, 2010, 14:50 [IST]