ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿದ್ದು ರಾಜೀನಾಮೆ ತಿರಸ್ಕರಿಸಿದ ಸೋನಿಯಾ
ಉಪಚುನಾವಣೆ ಫಲಿತಾಂಶ ಅನಿರೀಕ್ಷಿತವಾಗಿದೆ. ಸೋಲಿನ ಹೊಣೆ ಕೆಪಿಸಿಸಿಯ ಎಲ್ಲ ನಾಯಕರ ಮೇಲೂ ಆಗಿದೆ. ಹೀಗಾಗಿ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಪಕ್ಷದ ಸಂಘಟನೆಗೆ ಮುಂದಾಗುವಂತೆ ಹೈಕಮಾಂಡ್ ಸೂಚಿಸಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಸೋಲಿನ ಕಹಿಯನ್ನು ಮರೆತು ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಸ್ವತಃ ಸೋನಿಯಾ ಗಾಂಧಿ ಅವರೇ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಆದರೆ, ಸಿದ್ದರಾಮಯ್ಯ ಮಾತ್ರ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವನ್ನು ಅಲ್ಲಿನ ಮತದಾರ ಹುಸಿಗೊಳಿಸಿದ್ದರು. ಕಡೂರಿನಲ್ಲಿ ಬಿಜೆಪಿ ವಿಶ್ವನಾಥ ಆಯ್ಕೆಯಾದರೆ, ಗುಲ್ಬರ್ಗ ದಕ್ಷಿಣದಲ್ಲಿ ಜೆಡಿಎಸ್ ನಿಂದ ಅರುಣಾ ಪಾಟೀಲ್ ರೇವೂರು ಜಯಭೇರಿ ಬಾರಿಸಿದ್ದಾರೆ.
Comments
ಸಿದ್ದರಾಮಯ್ಯ ಸೋನಿಯಾ ಗಾಂಧಿ ಪ್ರತಿಪಕ್ಷ ನಾಯಕ ಉಪ ಚುನಾವಣೆ ರಾಜೀನಾಮೆ ಕಡೂರು ಗುಲ್ಬರ್ಗಾ ದಕ್ಷಿಣ siddaramaiah sonia gandhi bypolls resigns kadur gulbarga south
Story first published: Friday, September 24, 2010, 9:55 [IST]